Advertisement

ಸೂಡಾನ್‌ ಸಂಘರ್ಷ: ವೀರಾಜಪೇಟೆ ತಾಲೂಕಿನ ಕುಟುಂಬ ಸುರಕ್ಷಿತ

12:31 AM May 01, 2023 | Team Udayavani |

ಮಡಿಕೇರಿ: ಸೇನೆ ಹಾಗೂ ಅರೆ ಸೇನಾಪಡೆಗಳ ನಡುವಿನ ಸಂಘಷ‌ì‌ದಿಂದ ಬಳಲಿರುವ ಸೂಡಾನ್‌ ದೇಶದಲ್ಲಿ ಸಿಲುಕಿದ್ದ ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಒಂದು ಕುಟುಂಬವನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ.

Advertisement

ವೀರಾಜಪೇಟೆಯ ಮೊಹಿದ್ದೀನ್‌ ಅವರ ಕುಟುಂಬ ಸೂಡಾನಿನ ತೀವ್ರ ಸಂಘರ್ಷದ ಪ್ರದೇಶವಾದ ಖಾರ್ತೋಮ್‌ನಲ್ಲಿ ಸಿಲುಕಿತ್ತು. ಜಿಲ್ಲಾ ವಿಪತ್ತು ನಿರ್ವಹಣ ಕೇಂದ್ರಕ್ಕೆ ಈ ಬಗ್ಗೆ ಮಾಹಿತಿ ಬಂದ ಕೂಡಲೆ ಜಿಲ್ಲಾಧಿಕಾರಿ ಡಾ| ಬಿ.ಸಿ. ಸತೀಶ್‌ ಅವರು ಜಿಲ್ಲಾ ವಿಪತ್ತು ನಿರ್ವಹಣ ಪರಿಣಿತ ಆರ್‌.ಎಂ. ಅನನ್ಯ ವಾಸುದೇವ್‌ ಅವರಿಗೆ ಈ ಕಾರ್ಯಾಚರಣೆಯ ಜವಾಬ್ದಾರಿಯನ್ನು ವಹಿಸಿದ್ದರು.

ಮೊಹಿದ್ದೀನ್‌ ಅವರ ಕುಟುಂಬದ ಜತೆಗೆ ನಿರಂತರವಾದ ಸಂಪರ್ಕ ಸಾಧಿಸಿ ಧೈರ್ಯ ತುಂಬಿದ ಅನನ್ಯ ವಾಸುದೇವ್‌, ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರ ಹಾಗೂ ವಿದೇಶಾಂಗ ಸಚಿವಾಲಯದ ಸಹಯೋಗದೊಂದಿಗೆ ನಿರಂತರ ಸಂಪರ್ಕ ಸಾಧಿಸಿದ್ದರು. ಪರಿಣಾಮ 8 ತಿಂಗಳ ಹಾಗೂ 2.5 ವರ್ಷದ ಮಕ್ಕಳು ಸೇರಿದಂತೆ ಮೊಹಿದ್ದೀನ್‌ ಅವರ ಕುಟುಂಬದ 6 ಸದಸ್ಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕ್ಷೇಮವಾಗಿ ಕರೆತರುವಲ್ಲಿ ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರ ಯಶಸ್ವಿಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next