Advertisement

Subrahmanya: ಸುಬ್ರಹ್ಮಣ್ಯ; ಬಸ್‌ನಿಂದ ಬಿದ್ದು ಮಹಿಳೆಗೆ ಗಾಯ

08:04 PM Feb 29, 2024 | Team Udayavani |

ಸುಬ್ರಹ್ಮಣ್ಯ: ಸರಕಾರಿ ಬಸ್‌ನಿಂದ ಬಿದ್ದು ಮಹಿಳೆ ಗಾಯಗೊಂಡ ಘಟನೆ ಸುಬ್ರಹ್ಮಣ್ಯದಲ್ಲಿ ಫೆ. 27ರಂದು ಸಂಭವಿಸಿದೆ.

Advertisement

ಬಿಳಿನೆಲೆ ಗ್ರಾಮದ ಹೂವಪ್ಪ ಅವರ ಪತ್ನಿ ವಸಂತಿ ಎಂ. (42) ಮಗಳೊಂದಿಗೆ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಾ ಸುಬ್ರಹ್ಮಣ್ಯದ ಬಿಲದ್ವಾರದ ಬಳಿ ಬಸ್‌ ನಿರ್ವಾಹಕರಿಗೆ ತಿಳಿಸಿ ಇಳಿಯುತ್ತಿದ್ದಾಗ ನಿರ್ವಾಹಕ ಗಮನಿಸದೆ ಬಸ್‌ ಚಲಾಯಿಸಲು ಸೂಚನೆ ನೀಡಿದ್ದರು. ಬಸ್‌ ಚಲಿಸಿದ ಪರಿಣಾಮ ಅವರು ರಸ್ತೆಗೆ ಬಿದ್ದು ಗಾಯಗೊಂಡರು. ಅವರನ್ನು ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next