Advertisement

ಬಿಳಿನೆಲೆ: ಕಾರು, ಜೀಪ್‌ ಢಿಕ್ಕಿ; ಹಲವು ಮಂದಿಗೆ ಗಾಯ

11:32 PM Oct 30, 2022 | Team Udayavani |

ಸುಬ್ರಹ್ಮಣ್ಯ: ಕಾರು ಮತ್ತು ಜೀಪು ನಡುವೆ ಅಪಘಾತ ಸಂಭವಿಸಿ ಹಲವು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸುಬ್ರಹ್ಮಣ್ಯ-ಮರ್ದಾಳ-ಧರ್ಮಸ್ಥಳ ರಾಜ್ಯ ಹೆದ್ದಾರಿಯ ಬಿಳಿನೆಲೆ ಸಮೀಪ ರವಿವಾರ ಬೆಳಗ್ಗೆ ಸಂಭವಿಸಿದೆ.

Advertisement

ಹ್ಯುಂಡೈ ಕಾರು ಹಾಗೂ ಜೀಪು ಪರಸ್ಪರ ಢಿಕ್ಕಿಯಾಗಿದೆ. ಜೀಪು ಸುಬ್ರಹ್ಮಣ್ಯದಿಂದ ಕಡಬ ಕಡೆಗೆ ಹಾಗೂ ಕಾರು ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದು, ಬಿಳಿನೆಲೆಯ ಸಿಪಿಸಿಆರ್‌ಐ ಬಳಿ ಅಪಘಾತ ಸಂಭವಿಸಿದ್ದು, ಎರಡೂ ವಾಹನಗಳೂ ಜಖಂಗೊಂಡಿವೆ.

ಅಪಘಾತದಲ್ಲಿ ಎರಡೂ ವಾಹನಗಳ ಚಾಲಕರ ಸಹಿತ ಹಲವು ಮಂದಿ ಗಾಯಗೊಂಡಿದ್ದಾರೆ. ಕಡಬ ತಾಲೂಕಿನ ಕುಟ್ರಾಪಾಡಿಯ ಜೋಸೆಫ್‌ ಕುರಿಯನ್‌ (59), ಸನಲ್‌ (39), ಲಿನಿ ಜೋಸೆಫ್‌ (54), ಸೇರಿದಂತೆ ಕಾರಿನಲ್ಲಿದ್ದ ಪುಟ್ಟ ಮಕ್ಕಳು, ವಯಸ್ಕರು ಸಹಿತ ಆರು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next