Advertisement

ನೀತಿ ಸಂಹಿತೆ ವಿನಾಯಿತಿಗೆ ಪ್ರಸ್ತಾವನೆ ಸಲ್ಲಿಸಿ; ವಂದಿತಾ ಶರ್ಮಾ

11:29 PM Mar 29, 2023 | Team Udayavani |

ಬೆಂಗಳೂರು: ಚುನಾವಣೆ ಘೋಷಣೆಯಿಂದ ಜಾರಿಯಾದ ಮಾದರಿ ನೀತಿ ಸಂಹಿತೆಯಿಂದ ವಿನಾಯಿತಿ ಪಡೆಯಬೇಕಿರುವ ತುರ್ತು ಪ್ರಸ್ತಾವನೆಗಳನ್ನು ಪರಿಶೀಲನಾ ಸಮಿತಿ ಮುಂದೆ ಮಂಡಿಸುವಂತೆ ವಿವಿಧ ಇಲಾಖೆಗಳಿಗೆ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೂಚಿಸಿದ್ದಾರೆ.

Advertisement

ಮಾದರಿ ನೀತಿ ಸಂಹಿತೆ ವಿನಾಯಿತಿಗೆ ಬೇಕಾದ ಪ್ರಸ್ತಾವನೆಗಳಿಗೆ ಚುನಾವಣ ಆಯೋಗದ ಅನುಮೋದನೆ ಕೋರಲು ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿನ ಪರಿಶೀಲನಾ ಸಮಿತಿ ಮುಂದೆ ಮಂಡಿಸಬೇಕಾಗುತ್ತದೆ.

ಹಾಗಾಗಿ, ಆಯಾ ಇಲಾಖೆ/ ನಿಗಮ-ಮಂಡಳಿಗಳಿಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆಯಿಂದ ವಿನಾಯಿತಿ ಪಡೆಯಬೇಕಿರುವ ತುರ್ತು ಪ್ರಸ್ತಾವನೆಗಳನ್ನು ಸೂಕ್ತ ಸಮರ್ಥನೆಗಳೊಂದಿಗೆ ಸಮಿತಿ ಮುಂದೆ ಮಂಡಿಸುವಂತೆ ವಂದಿತಾ ಶರ್ಮಾ ನಿರ್ದೇಶನ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next