Advertisement

ಸೆಲ್ಫಿ ಕ್ಲಿಕ್ಕಿಸಲು ಹೋಗಿ ಕಾಲುವೆಗೆ ಬಿದ್ದ ವಿದ್ಯಾರ್ಥಿಗಳು; ಇಬ್ಬರು ಸಾವು!

12:08 PM Sep 19, 2022 | Team Udayavani |

ರಾಯಚೂರು: ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಕ್ರೇಜ್ ನಿಂದಾಗಿ ಕಾಲುವೆಗೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ತಾಲ್ಲೂಕಿನ ಕಲ್ಮಲಾ ಬಳಿಯ ಟಿಎಲ್ ಬಿಸಿಯಲ್ಲಿ ನಡೆದಿದೆ.

Advertisement

ನಗರದ ವಿದ್ಯಾನಿಧಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಸುಜಿತ್, ವೈಭವ್ ಮೃತ ದುರ್ದೈವಿಗಳು. ಸುಮಾರು 200 ಮೀ. ದೂರದಲ್ಲಿ ಇವರ ಮೃತದೇಹಗಳು ಪತ್ತೆಯಾಗಿವೆ.

ರವಿವಾರ ನಾಲ್ವರು ಪಿಕ್‌ನಿಕ್ ಗೆಂದು ಹೋಗಿದ್ದರು. ನಾಗೇಂದ್ರ ಹಾಗೂ ತರುಣ್ ಎಂಬುವವರು ಈಜಿ ದಡ ಸೇರಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ರಾಯಚೂರು ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದರು.

ಇದನ್ನೂ ಓದಿ:ಜಗಳೂರು: ಎಟಿಎಂ ಒಡೆದು ಹಣ ದೋಚಿದ ಖದೀಮರು

ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next