Advertisement

ಬಸ್‌ಗೆ ವಿದ್ಯಾರ್ಥಿಗಳ ಮನವಿ

05:40 PM Jul 27, 2022 | Shwetha M |

ಬಸವನಬಾಗೇವಾಡಿ: ನರಸಲಗಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಮರ್ಪಕ ಬಸ್‌ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಸೋಮವಾರ ವಿದ್ಯಾರ್ಥಿಗಳು ಬಸ್‌ ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

Advertisement

ನರಸಲಗಿ ಸೇರಿದಂತೆ ಅಂಬಳನೂರ, ಕೊಡಗಾನೂರ, ಇವಣಗಿ, ಹಂಚಿನಾಳ ಗ್ರಾಮಗಳಿಂದ ಪಟ್ಟಣದ ವಿವಿಧ ಶಾಲಾ ಕಾಲೇಜಿಗೆ ಬರುತ್ತೇವೆ. ಸರಿಯಾದ ಸಮಯಕ್ಕೆ ಬಸ್‌ ಬರದಿರುವುದರಿಂದ ತರಗತಿಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಮಧ್ಯಾಹ್ನ ಹಾಗೂ ಸಂಜೆ ಮನೆಗೆ ಹಿಂದಿರುಗಲು ಕಿ.ಮೀ.ವರೆಗೆ ನಡೆದುಕೊಂಡು ಹೋಗಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.

ಇಟ್ಟಗಿ ಗ್ರಾಪಂ ಸದಸ್ಯ ಭಾಷಾಸಾಹೇಬ ದಿಂಡವಾರ, ಮುತ್ತುರಾಜ ಹಾಲಿಹಾಳ, ಅರ್ಜುನ ಅಂಬಳನೂರ, ಡಿಎಸ್ಸೆಸ್‌ ಮುಖಂಡ ಯಮನೂರಿ ಚಲವಾದಿ, ಪವಾಡೇಶ ಮಣ್ಣೂರ ಸೇರಿದಂತೆ ಅನೇಕರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next