Advertisement

ಇನ್‌ಸ್ಟಗ್ರಾಂನಲ್ಲಿ ಸಾರಿ ಬರೆದು ಆತ್ಮಹತ್ಯೆ

10:28 AM Jun 03, 2022 | Team Udayavani |

ಬೆಂಗಳೂರು: ಮಾನಸಿಕ ಖನ್ನತೆಗೊಳಗಾಗಿದ್ದ ಬಿ. ಕಾಂ ವಿದ್ಯಾರ್ಥಿಯೊಬ್ಬ ಇನ್‌ಸ್ಟ್ರಾಗ್ರಾಂನಲ್ಲಿ ಸಾರಿ ಎಂದು ಬರೆದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ  ನಡೆದಿದೆ.

Advertisement

ಜ್ಞಾನಭಾರತೀಯ ಭುವನೇಶ್ವರಿನಗರದ ಮನೋಜ್‌ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಭುವನೇಶ್ವರಿ ನಗರದ ರಮೇಶ್‌ ಅವರ ಪುತ್ರ ಮನೋಜ್‌ ನಗರದ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದ. ಮೂರು ದಿನಗಳಿಂದ ಮಾನಸಿಕ ಖನ್ನತೆಗೊಳಗಾಗಿದ್ದು, ಯಾರೊಂದಿಗೆ ಬೇರೆಯುತ್ತಿರಲಿಲ್ಲ. ಕಾಲೇಜು ಮುಗಿಸಿ ಬಂದು ನೇರವಾಗಿ ಕೋಣೆ ಸೇರಿಕೊಳ್ಳುತ್ತಿದ್ದ. ಬುಧವಾರ ರಾತ್ರಿ ಊಟ ಮುಗಿಸಿದ್ದ ಮನೋಜ್‌, ಮಲಗಲು ಪಕ್ಕದಲ್ಲೇ ಇರುವ ಅಜ್ಜಿ ಮನೆಗೆ ಹೋಗಿದ್ದಾನೆ. ಗುರುವಾರ ಬೆಳಗ್ಗೆ 7.30 ಗಂಟೆಯಾದರೂ ಮನೋಜ್‌ ಕೋಣೆಯಿಂದ ಹೊರ ಬಂದಿಲ್ಲ. ಮನೋಜ್‌ ತಾಯಿ ಮತ್ತು ಅಜ್ಜಿ ಹೊರಗಡೆಯಿಂದಲೇ ಕಾಲೇಜಿಗೆ ಹೋಗಲು ಸಿದ್ಧವಾಗಲ್ಲವೇ? ಎಂದು ಕೇಳಿದ್ದಾರೆ. ಆಗಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ಅನುಮಾನಗೊಂಡು ಕೊಣೆಗೆ ಹೋದಾಗ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಕಲಬುರಗಿಯಲ್ಲಿ ಭಾರೀ ದುರಂತ: ವೋಲ್ವೋ ಬಸ್ಸಿಗೆ ಬೆಂಕಿ, ಹಲವರ ಸಜೀವ ದಹನ

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು ಪರಿಶೀಲಿಸಿ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next