Advertisement

ವಿದ್ಯಾರ್ಥಿನಿ ಅಪಹರಿಸಿ, ಅತ್ಯಾಚಾರ: ಮೂವರ ಸೆರೆ

12:17 PM Jul 22, 2017 | Team Udayavani |

ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪಿ ಹಾಗೂ ಇದಕ್ಕೆ ಸಹಕರಿಸಿದ ಇಬ್ಬರನ್ನು ಮಾಡಬೂಳ ಪೊಲೀಸರು ಬಂಧಿಸಿದ್ದಾರೆ.

Advertisement

ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪಿ ಶ್ರೀನಾಥ ಶಿವಲಿಂಗಪ್ಪ ಮನ್ನೂರ್‌, ಕೃತ್ಯಕ್ಕೆ ಸಹಕರಿಸಿದ್ದ ಶರಣು ನಾಗಪ್ಪ ತೊಟ್ನಳ್ಳಿ , ಮಲ್ಲಪ್ಪ ಅರ್ಜುನ ಮನ್ನೂರ ಎಂಬುವರನ್ನು ಪೊಲೀಸರು ಬಂಧಿ ಸಿ, ಗುರುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜು. 13ರಂದು ಶಾಲೆಯಲ್ಲಿ ಕಾರ್ಯಕ್ರಮ ಇದೆ ಎಂದು ಮನೆಯಲ್ಲಿದ್ದ ಮೊಬೈಲ್‌ ತೆಗೆದುಕೊಂಡು ಹೋದ ಮಗಳು
ಸಂಜೆ 6 ಗಂಟೆಯಾದರೂ ವಾಪಸ್‌ ಬಂದಿರಲಿಲ್ಲ. ತನ್ನ ಗೆಳತಿಯರ ಅಥವಾ ಸಂಬಂಧಿಕರ ಮನೆಗೆ ಹೋಗಿರಬಹುದು ಎಂದು ವಿಚಾರಿಸಿದರೂ ಸುಳಿವು ಸಿಕ್ಕಿಲ್ಲ ಎಂದು ವಿದ್ಯಾರ್ಥಿನಿಯ ತಾಯಿ ಜು. 18ರಂದು ಮಾಡಬೂಳ ಠಾಣೆಗೆ ದೂರು ಸಲ್ಲಿಸಿದ್ದರು. ಮನೆ ಮುಂಭಾಗದಲ್ಲೇ ಇರುವ ಶ್ರೀನಾಥ ಶಿವಲಿಂಗಪ್ಪ ಎಂಬಾತ ನಮ್ಮ ಮಗಳನ್ನು ಪುಸಲಾಯಿಸಿ ಕರೆದೊಯ್ದಿದ್ದಾನೆ. ಇದಕ್ಕೆ ಶರಣು, ಮಲ್ಕಪ್ಪ ಎನ್ನುವರು ಕುಮ್ಮಕ್ಕು ನೀಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

ಯಶಸ್ವಿ ಕಾರ್ಯಾಚರಣೆ: ಎಸ್ಪಿ ಶಶಿಕುಮಾರ, ಶಹಾಬಾದ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಕಾಳಗಿ ಸಿಪಿಐ ಡಿ.ಬಿ. ಕಟ್ಟಿಮನಿ ನೇತೃತ್ವದಲ್ಲಿ ಪಿಎಸ್‌ಐ ಹುಸೇನ್‌ ಬಾಷಾ ಅವರ ತಂಡವು ಅಪಹರಣ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿತ್ತು. ಪಿಎಸ್‌ಐ ತಂಡದಲ್ಲಿ ಸಿಬ್ಬಂದಿ ರವಿ ಮುದ್ದಡಗಿ, ಜಗನ್ನಾಥ ಪಾಟೀಲ, ಅಬ್ದುಲ್‌ ರವೂಫ್, ರಾಮು ರಾಥೋಡ, ಗುರಣ್ಣ ಸಂತೋಷ, ವಿಷ್ಣು, ರೇಣುಕಾ ಅವರು ಆರೋಪಿಗಳು ಬೆಂಗಳೂರಿನಲ್ಲಿರುವ ಸುಳಿವು ಅರಿತು, ಬಂಧಿಸಿದ್ದಾರೆ.
ನಿನ್ನನ್ನು ಪ್ರೀತಿಸುತ್ತಿದ್ದೇನೆ, ಮದುವೆಯಾಗುತ್ತೇನೆ ಎಂದು ನಂಬಿಸಿ ಶ್ರೀನಾಥ್‌ ಆರು ತಿಂಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದ. ಜು. 13ರಂದು ತನಗೆ ಕರೆ ಮಾಡಿ, “ನಿನ್ನೊಂದಿಗೆ ಮಾತನಾಡುವುದಿದೆ. ವಾಡಿಗೆ ಬಾ’ ಎಂದು ತಿಳಿಸಿದ್ದ. ಅದರಂತೆ ರಾವೂರಿಗೆ ಹೋದ ತನ್ನನ್ನು ಮೊದಲು ವಾಡಿಗೆ, ಆನಂತರ ಬೆಂಗಳೂರಿಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ.

ಇದಕ್ಕೆ ಶರಣು, ಮಲ್ಕಪ್ಪ ಎಂಬುವರು ಕುಮ್ಮಕ್ಕು ನೀಡಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಆರೋಪಿಗಳ ವಿರುದ್ಧ ಮಾಡಬೂಳ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next