Advertisement

ಕಾಲೇಜಿನಲ್ಲೇ ಕತ್ತು ಸೀಳಿ ವಿದ್ಯಾರ್ಥಿನಿ ಹತ್ಯೆ! ಭಗ್ನಪ್ರೇಮಿಯಿಂದ ಕೃತ್ಯ

01:17 AM Jan 03, 2023 | Team Udayavani |

ಬೆಂಗಳೂರು: ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ ಬಿಇ ವಿದ್ಯಾರ್ಥಿನಿಯನ್ನು ಕಾಲೇಜು ಆವರಣದಲ್ಲೇ ಯುವಕನೊಬ್ಬ ಚೂರಿಯಿಂದ ಇರಿದು ಕೊಂದು, ಬಳಿಕ ತಾನೂ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜಾನುಕುಂಟೆ ಸಮೀಪದ ಖಾಸಗಿ ಕಾಲೇಜಿನಲ್ಲಿ ನಡೆದಿದೆ.

Advertisement

ರಾಜಾನುಕುಂಟೆಯ ದಿಬ್ಬೂರು ಗ್ರಾಮದ ಬಳಿಯಿರುವ ಖಾಸಗಿ ಕಾಲೇಜಿನ ಪ್ರಥಮ ವರ್ಷದ ಬಿಇ ವಿದ್ಯಾರ್ಥಿನಿ ಲಯಸ್ಮಿತಾ (19) ಕೊಲೆಯಾದವರು. ಬೆಂಗಳೂರು ನಗರದ ಕಾಲೇಜೊಂದರ ಬಿಇ ವಿದ್ಯಾರ್ಥಿ ಪವನ್‌ ಕಲ್ಯಾಣ್‌ (19) ಆರೋಪಿ. ಈತನನ್ನು ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಇಬ್ಬರೂ ಕೋಲಾರದ ಮುಳಬಾಗಿಲು ತಾಲೂಕಿನವರು ಹಾಗೂ ಎರಡು ವರ್ಷಗಳಿಂದ ಪರಿಚಿತರಾಗಿದ್ದರು ಎಂದು ಹೇಳಲಾಗಿದೆ. ವಿದಾರ್ಥಿನಿಯನ್ನು ಪವನ್‌ ಒಂದು ವರ್ಷದಿಂದ ಪ್ರೀತಿಸುತ್ತಿದ್ದ. ಆದರೆ ಆಕೆ ಸ್ಪಂದಿಸುತ್ತಿರಲಿಲ್ಲ ಎನ್ನಲಾಗಿದೆ.

ಕಾಲೇಜು ಆವರಣದಲ್ಲೇ ಕೃತ್ಯ
ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾ ರಿಗೆ ರಾಜಾನುಕುಂಟೆಯ ಕಾಲೇಜಿಗೆ ಬಂದ ಪವನ್‌, ಸ್ನೇಹಿತರ ಜತೆ ಮಾತನಾಡುತ್ತಿದ್ದ ಲಯಸ್ಮಿತಾ ಬಳಿಗೆ ತೆರಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ.

ಆಕೆ ನಿರಾಕರಿಸಿದಾಗ ತನ್ನ ಬ್ಯಾಗ್‌ನಲ್ಲಿದ್ದ ಚಾಕು ತೆಗೆದು ಆಕೆಯ ಕತ್ತು ಕೊಯ್ದಿದ್ದಾನೆ. ಬಳಿಕ ಆತನೂ ತನ್ನ ಹೊಟ್ಟೆಯ ಭಾಗಕ್ಕೆ ಎರಡೂ¾ರು ಬಾರಿ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿಯವರು ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಲಯಸ್ಮಿತಾ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next