Advertisement

ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ

04:01 PM Jun 19, 2022 | Shwetha M |

ಚಡಚಣ: ಪಟ್ಟಣದ ಶಿದಾಸಿಮಯ್ಯ ಶಿವಸಿಂಪಿ ಸಮಾಜ ಅಲ್ಪ ಸಂಖ್ಯಾತವಾಗಿದ್ದು ಅಭಿವೃದ್ಧಿಯಾಗಿಲ್ಲ. ಸಮಾಜದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಡಾ| ದೇವಾನಂದ ಚವ್ಹಾಣ ಹೇಳಿದರು.

Advertisement

ಮರಡಿಯ ಕೆಇಬಿ ಎದುರುಗಡೆ ಇರುವ ಸಿದ್ದಾಶ್ರಮದಲ್ಲಿ ಶಿವಸಿಂಪಿ ಸಮಾಜದವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೇವಲ ಮನವಿ ಕೊಟ್ಟರೆ ಕೆಲಸ ಮುಗಿದಂತಲ್ಲ. ತಾವು ಬೇಡಿಕೆಯನ್ನಿಟ್ಟಿರುವಿರಿ. ಪ್ರಾಮಾಣಿಕವಾಗಿ ತಮ್ಮ ಕೆಲಸ ಮಾಡಿ ತೋರಿಸುವೆ ಎಂದು ಭರವಸೆ ನೀಡಿದರು.

ಸಮಾಜದ ಅಧ್ಯಕ್ಷ ಸುರೇಶ ಮೊಗಲಿ ಮಾತನಾಡಿ, ಶಿವಸಿಂಪಿ ಸಮಾಜದ ಅಭಿವೃದ್ಧಿಗೆ ನಮ್ಮ ಶಾಸಕರು ಬದ್ಧರಿದ್ದು ಅವರಿಗೆ ನಮ್ಮ ಸಮಾಜ ವಿಧೇಯಕವಿರುತ್ತದೆ ಎಂದರು.

ಎಸ್‌.ಎಂ.ಚೋಳಖೆ, ಸಂಗಣ್ಣ ನಿಗಡಿ, ಸುರೇಶ ಮೊಗಲಿ, ಜಗು ಮುಂಬೈ, ರವಿ ಮುಂಬೈ, ಸಚಿನ ಯಳಮೇಲಿ, ಪ್ರವೀಣ ಕಲ್ಯಾಣಶೆಟ್ಟಿ, ಚಿದಾನಂದ ಸರಸಂಬಿ, ಸಿದ್ದು ಸೋಲಾಪುರ, ಭೀಮಾಶಂಕರ ವಾಳಿಖೀಂಡಿ, ರಾಮ ಮಾಲಾಪುರ, ಯುನೂಸ್‌ಅಲಿ ಮಕಾನದಾರ ಇದ್ದರು.ಅನಿಲ ಕಲ್ಯಾಣಶೆಟ್ಟಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next