Advertisement

ಬೀದಿದೀಪ ಅಳವಡಿಸುವಂತೆ ಆಗ್ರಹಿಸಿ ದೊಂದಿ ಬೆಳಕಿನ ಪ್ರತಿಭಟನೆ

10:49 PM Nov 02, 2021 | Team Udayavani |

ಉಡುಪಿ: ಕಡಿಯಾಳಿ- ಪರ್ಕಳ ರಾ.ಹೆ. 169ರ ಮಾರ್ಗದಲ್ಲಿ ಇದುವರೆಗೆ ಬೀದಿದೀಪಗಳನ್ನು ಅಳವಡಿಸಿದೆ ಇರುವುದನ್ನು ಖಂಡಿಸಿ ಜಿಲ್ಲಾ ನಾಗರಿಕರ ಸಮಿತಿ ವತಿಯಿಂದ ಮಂಗಳವಾರ ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ನಿಲಯದ ಮುಂಭಾಗದ ರಾ.ಹೆ. ಮಾರ್ಗದಲ್ಲಿ ದೊಂದಿ ಬೆಳಕಿನ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾ ನಾಗರಿಕರ ಸಮಿತಿ ಅಧ್ಯಕ್ಷ ನಿತ್ಯಾನಂದ ಒಳಕಾಡು ಮಾತನಾಡಿ, ರಸ್ತೆ ಕಾಮಗಾರಿ ಪೂರ್ಣಗೊಂಡ ವರ್ಷ ಸಮೀಪಿಸುತ್ತಿದೆ. ಇದುವರೆಗೆ ಬೀದಿ ದೀಪ ಅಳವಡಿಸುವ ಕಾರ್ಯ ಪ್ರಾರಂಭವಾಗಿಲ್ಲ. ಇದರಿಂದಾಗಿ ರಾತ್ರಿ ಹಾಗೂ ಮುಂಜಾನೆ ಈ ಮಾರ್ಗವಾಗಿ ಸಂಚರಿಸುವ ಪಾದಚಾರಿಗಳು ಅಪಘಾತಕ್ಕೆ ತುತ್ತಾಗುತ್ತಿದ್ದಾರೆ. ಜತೆಗೆ ಮಾರ್ಗ ಬದಿಯಲ್ಲಿ ಆಳೆತ್ತರಕ್ಕೆ ಗಿಡಗಂಟಿಗಳು ಬೆಳೆದು ನಿಂತಿವೆ. ಜಿಲ್ಲಾಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರ ಇಲಾಖೆ ಶೀಘ್ರದಲ್ಲಿ ಬೀದಿ ದೀಪಗಳನ್ನು ಅಳವಡಿಸಿ, ರಸ್ತೆ ಬದಿಯ ಹುಲ್ಲು ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಲಖೀಂಪುರ ಕಿಸಾನ್‌ ಸ್ಮತಿ ದಿವಸ ಆಚರಿಸುವಂತೆ ಸಮಾಜವಾದಿ ಪಕ್ಷ ಕರೆ

ಜಿಲ್ಲಾ ನಾಗರಿಕರ ಸಮಿತಿ ತಾರನಾಥ ಮೇಸ್ತ, ಎಂಜಿಎಂ ಕಾಲೇಜಿನ ರಿಕ್ಷಾ ನಿಲ್ದಾಣ ಚಾಲಕರು, ಗುರುರಾಜ್‌ ಆಚಾರ್ಯ, ಕೆ. ಬಾಲಗಂಗಾಧರ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next