Advertisement

ಕುಕ್ಕೆ: ಯಾತ್ರಿಕನಿಗೆ ಬೀದಿ ನಾಯಿ ಕಡಿತ; ಆಟೋ ಪಲ್ಟಿ

09:40 PM Dec 01, 2022 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಭಕ್ತರೊಬ್ಬರಿಗೆ ಬೀದಿ ನಾಯಿ ಕಡಿದ ಘಟನೆ ಗುರುವಾರ ಸಂಭವಿಸಿದೆ.

Advertisement

ಡಾ| ರವಿ ಕಕ್ಕೆಪದವು ಸೇರಿದಂತೆ ಇತರರು ಗಾಯಾಳುವನ್ನು ಕಡಬ ಆಸ್ಪತ್ರೆಗೆ ದಾಖಲಿಸಿದರು. ಬುಧವಾರ ನಾಯಿ ಅಡ್ಡಬಂದ ಪರಿಣಾಮ ಅಟೋ ರಿಕ್ಷಾವೊಂದು ಪಲ್ಟಿಯಾಗಿ ಹಾನಿಗೀಡಾಗಿದೆ.

ಸುಬ್ರಹ್ಮಣ್ಯದಲ್ಲಿ ಬೀದಿ ನಾಯಿ ಹಾವಳಿ ಬಗ್ಗೆ ಈ ಹಿಂದೆಯೇ ದೂರು ವ್ಯಕ್ತವಾಗಿತ್ತು. ಜಾತ್ರೆಯ ಪೂರ್ವಭಾವಿ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾವಗೊಂಡಾಗ ಬೀದಿ ನಾಯಿ, ಅಲೆಮಾರಿ ಜಾನುವಾರುಗಳನ್ನು ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next