Advertisement

ಯಾರು ಹೊಣೆ? ಆಟೋ ಬಾಡಿಗೆ 100 ರೂ., ತೆತ್ತ ದಂಡ 6000 ರೂ.: ಆಟೋ ಚಾಲಕನ ನತದೃಷ್ಟ ಕಥೆಯಿದು

11:03 AM Oct 22, 2021 | Team Udayavani |

ಚಿಕ್ಕಮಗಳೂರು: ಸಹಾಯ ಮಾಡಲು ಹೋಗಿ, ಕೊನೆಗೆ ತಾನೇ ಸಾಲಗಾರನಾದ ಆಟೋ ರಿಕ್ಷಾ ಚಾಲಕನ ಕಥೆಯಿದೆ. 100 ರೂ. ಬಾಡಿಗೆ ದೆಸೆಯಿಂದ ಆಟೋ ಚಾಲಕ ಸುಮಾರು ಆರು ಸಾವಿರ ರೂಪಾಯಿ ಕಳೆದುಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

Advertisement

ಆಟೋ ಚಾಲಕ ವಿನೋದ್ ಅವರು ಬಾಡಿಗೆಗೆಂದು ಮುಕ್ತ ವಿಶ್ವವಿದ್ಯಾಲಯಕ್ಕೆ ಬಂದಿದ್ದರು. ಆದರೆ ಈ ವೇಳೆ ಭಾರೀ ಮಳೆಯಿಂದಾಗಿ ಮುಕ್ತ ವಿಶ್ವವಿದ್ಯಾಲಯದ ಗೇಟ್ ಬಳಿಯ ಸೇತುವೆ ಕುಸಿದಿತ್ತು. ಹೀಗಾಗಿ ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿಯೇ ಸಿಕ್ಕಿಹಾಕಿಕೊಂಡಿದ್ದರು. ಬಾಡಿಗೆಗೆ ಬಂದಿದ್ದ ಆಟೋ ವಿಶ್ವವಿದ್ಯಾಲಯದ ಬಳಿಯೇ ಲಾಕ್ ಆಗಿದೆ.

ಇದನ್ನೂ ಓದಿ:ಕಟ್ಟಡ ಕುಸಿತ ಘಟನೆಗಳಿಂದ ಎಚ್ಚೆತ್ತ ಬಾಡಿಗೆದಾರರು

ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ಅಗ್ನಿಶಾಮಕ ದಳ ಭೇಟಿ ನೀಡಿ ವಿದ್ಯಾರ್ಥಿಗಳ ರಕ್ಷಣೆ ಮಾಡಲಾಗಿದೆ. ಆದರೆ, ಆಟೋ ಚಾಲಕನನ್ನು ಜಿಲ್ಲಾಡಳಿತ ಮರೆತು ಬಿಟ್ಟಿದೆ.

Advertisement

ಸೇತುವೆ ಮತ್ತೆ ಸಿದ್ದವಾಗಲು ತಿಂಗಳುಗಳೇ ಬೇಕು, ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ವಿನೋದ್ ಅಲ್ಲಿವರೆಗೂ ಜೀವನ ಹೇಗೆಂದು ಆತಂಕಕ್ಕೀಡಾಗಿದ್ದರು. ಆಟೋ ಸ್ಥಳಾಂತರಿಸಲು ಸಹಾಯ ಮಾಡುವುದಾಗಿ ವಿಶ್ವವಿದ್ಯಾಲಯ ಹೇಳಿತ್ತು. ಆದರೆ, ಕೊನೆಗೆ ಯಾರೂ ಸಹಾಯ ಮಾಡಲಿಲ್ಲ.

ಹೀಗಾಗಿ ದಾರಿ ಕಾಣದೆ ವಿನೋದ್ ಸಾಲ ಮಾಡಿ 6000 ಹಣ ನೀಡಿ ಕ್ರೇನ್ ಮೂಲಕ ಆಟೋವನ್ನ ಲಿಫ್ಟ್ ಮಾಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next