Advertisement

ಬಿರುಗಾಳಿ ಸಹಿತ ಮಳೆ ಕೋಳಿಫಾರಂ ಸಂಪೂರ್ಣ ನಾಶ

03:00 PM Apr 20, 2022 | Team Udayavani |
ಹುಣಸೂರು: ವಾರದಿಂದ ಬಿರುಗಾಳಿ ಮಳೆಗೆ ಹತ್ತಾರು ಎಕರೆ ಬೆಳೆ ನಾಶ. ಮತ್ತೊಂದೆಡೆ ಮನೆ ಗಳಿಗೆ ಹಾನಿಯಾಗಿದ್ದರೆ. ಇದೀಗ ಮಂಗಳವಾರ ಸಂಜೆ ಬೀಸಿದ ಬಿರುಗಾಳಿ ಸಹಿತ ಮಳೆಗೆ ನಗರಕ್ಕೆ ಸಮೀಪದ ಉದ್ದೂರಿನಲ್ಲಿ ಕೋಳಿ ಫಾರಂ ಸಂರ್ಪೂನೆಲಕಚ್ಚಿದ್ದು, ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ತಾಲೂಕಿನ ಕಸಬಾ ಹೋಬಳಿಗೆ ಸೇರಿದ ಉದ್ದೂರು ಗ್ರಾಮದ ರಾಮಚಂದ್ರ ನಾಯಕರ ಕೋಳಿಫಾರಂ ಸಂಪೂರ್ಣ ನಾಶವಾಗಿದ್ದು. ಬ್ಯಾಂಕಿನಿಂದ 10 ಲಕ್ಷ ಅಲ್ಲದೆ 10 ಲಕ್ಷ ಕೈಸಾಲ ಮಾಡಿ ಕೋಳಿ ಸಾಕಣೆ ನಡೆಸಿ ಜೀವನ ನಡೆಸುತ್ತಿದ್ದರು. ಮಂಗಳವಾರ ಸಂಜೆ ಮಳೆ ಜೊತೆಗೆ ಬಾರೀ ಬಿರುಗಾಳಿಯಿಂದಾಗಿ ಕೋಳಿ ಫಾರಂ ಮೇಲ್ಚಾವಣಿ ಕುಸಿದು ಬಿದ್ದು. ಸಂಪೂರ್ಣನಾಶವಾಗಿದೆ. ಸಾಲ ತೀರಿಸುವ ದಾರಿ ಕಾಣದೆ ಹೊಸ ಫಾರಂ ನಿರ್ಮಿಸಿಕೊಳಲಾಗದೆ ಅತಂತ್ರರಾಗಿದ್ದು .ಶಾಸಕ ಎಚ್.ಪಿ.ಮಂಜುನಾಥರು ಸರಕಾರದ ಮೇಲೆ ಒತ್ತಡ ಹಾಕಿ ನೆರವಿಗೆ ಬರಬೇಕೆಂದು ಮನವಿ ಮಾಡಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next