Advertisement

ಸುಂಟಿಕೊಪ್ಪದಲ್ಲಿ ಬಿರುಗಾಳಿ: ಹೆದ್ದಾರಿಗೆ ಉರುಳಿದ ಮರ

03:11 AM Mar 04, 2021 | Team Udayavani |

ಮಡಿಕೇರಿ: ಸುಂಟಿಕೊಪ್ಪ ಸುತ್ತಮುತ್ತ ಬೀಸಿದ ಭಾರೀ ಗಾಳಿಗೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ವಿವಿಧ ಕಡೆ 3 ಬೃಹತ್‌ ಮರಗಳು ಉರುಳಿ ಬಿದ್ದ ಘಟನೆ ನಡೆದಿದೆ. ಇದರಿಂದಾಗಿ ಕೆಲವು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.

Advertisement

ಮಾದಾಪುರ ರಸ್ತೆಯ ಪನ್ಯದ ಮಾರಿಯಮ್ಮ ದೇಗುಲದ ಬಳಿ ಮಂಗಳವಾರ ರಾತ್ರಿ ಬಿರುಗಾಳಿಗೆ ಭಾರಿ ಗಾತ್ರದ ಮರ ಬುಡ ಸಹಿತ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಮೂರು ವಿದ್ಯುತ್‌ ಕಂಬಗಳು ಉರುಳಿದ್ದು ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು. ಸೆಸ್ಕ್ ಇಲಾಖೆಯ ಸಿಬಂದಿ ಮರವನ್ನು ತೆರವುಗೊಳಿಸಿ ವಾಹನ ಸಂಚಾರ ಮತ್ತು ವಿದ್ಯುತ್‌ ಸಂಪರ್ಕ ಸರಿಪಡಿಸಿದರು.

ಕೊಡಗರಹಳ್ಳಿ ಸಮೀಪ ಬೆಳಿಗ್ಗೆ 11 ಗಂಟೆಗೆ ಬೀಸಿದ ಭಾರಿ ಗಾಳಿಗೆ ಮರವೊಂದು ಹೆದ್ದಾರಿಗೆ ಅಡ್ಡಲಾಗಿ ಬಿತ್ತು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಮಡಿಕೇರಿ ಕಡೆಗೆ ಆಗಮಿಸುತ್ತಿದ್ದ ದಂಪತಿ ಅದೃಷ್ಟವಶಾತ್‌ ಯಾವುದೇ ರೀತಿಯ ಗಾಯಗಳಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next