Advertisement

Hijab; ಅಧಿಕಾರಕ್ಕೆ ಬಂದಾಗಲೆಲ್ಲ ಅಲ್ಪಸಂಖ್ಯಾತರನ್ನು ಓಲೈಸುವುದನ್ನು ಬಿಡಿ: ಶೋಭಾ ಕರಂದ್ಲಾಜೆ

04:45 PM Dec 24, 2023 | Team Udayavani |

ಚಿಕ್ಕಮಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆ ಹಿಜಾಬ್ ಮುನ್ನೆಲೆಗೆ ತರಲಾಗಿದೆ. ನೀವು ಅಧಿಕಾರಕ್ಕೆ ಬಂದಾಗಲೆಲ್ಲ ಅಲ್ಪಸಂಖ್ಯಾತರನ್ನು ಓಲೈಸುವುದನ್ನು ಬಿಡಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

ಭಾನುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, 2013ರಲ್ಲಿ ಅಧಿಕಾರಕ್ಕೆ ಬಂದಾಗ ಟಿಪ್ಪು ಜಯಂತಿ ಹುಟ್ಟು ಹಾಕಿದಿರಿ, ಈಗ ಶಾಲೆ ಕಾಲೇಜುಗಳಲ್ಲಿ ಯೂನಿಫಾರಂ ತಗೆದು ಹಿಜಾಬ್ ಹಾಕಿಸಲು ಹೊರಟಿದ್ದೀರಾ, 2018ರಲ್ಲಿ ನಿಮ್ಮ ಮುಖವಾಡ ಕಳಚಿ ಬಿದ್ದಿತ್ತು. ಅಭಿವೃದ್ಧಿ ಕೆಲಸ ಮಾಡದೆ, ಹಿಂದೂ, ಮುಸ್ಲಿಂ ನಡುವೆ ಒಡೆದಾಳುವ ಕೆಲಸ ಮಾಡುತ್ತಿದ್ದಾರೆ ಎಂದರು.

ಇದನ್ನು ಬಿಟ್ಟು ಅಭಿವೃದ್ಧಿ ಕೆಲಸಕ್ಕೆ ನಿಮ್ಮ ಶಾಸಕರಿಗೆ ಹಣ ನೀಡಿ ಎಂದು ಹೇಳಿದರು.

ಯಾರು ಬೂಟು ನೆಕ್ಕೋರು, ಯಾರು ಬ್ರಿಟಿಷರ ಪರ ಇದ್ದರು ಎಂಬುದು ಚರಿತ್ರೆಯಲ್ಲಿದೆ ಎಂದು ಬಿ.ಕೆ.ಹರಿಪ್ರಸಾದ್ ವಿರುದ್ದ ಕಿಡಿಕಾರಿದರು. ಇದನ್ನು ಮತ್ತೆ ಕೆದಕಲು ಬರಬೇಡಿ ಎಂದ ಅವರು, ಕೆದಕೋಕೆ ಬಂದರೆ ನಿಮ್ಮ ಮುಖಕ್ಕೆ ಮಸಿ ಬೀಳುತ್ತದೆ. ಜನ ಅಭಿವೃದ್ಧಿ, ಶಾಂತಿ ಕೇಳುತ್ತಿದ್ದಾರೆ. ಕಾಂಗ್ರೆಸ್ ನವರು ಯಾರ ಬಗ್ಗೆ ಮಾತನಾಡುತ್ತಿದ್ದೀರಿ, ಯಾರ ಬೂಟು ನೆಕ್ಕುತ್ತಿದ್ದೀರಿ ಎಂಬುದನ್ನು ನೀವೇ ನೋಡಿಕೊಳ್ಳಿ ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next