Advertisement

ಬಾಬಾ ಸಾಹೇಬರ ಹೆಸರಿಗೆ ಮಸಿ ಬಳಿಯುವುದನ್ನು ನಿಲ್ಲಿಸಿ: ಬಿ.ಕೆ.ಹರಿಪ್ರಸಾದ್‌

09:59 PM Dec 06, 2022 | Team Udayavani |

ಬೆಂಗಳೂರು: ಬಾಬಾ ಸಾಹೇಬರ ಮಾನವೀಯ ಸಿದ್ಧಾಂತಕ್ಕೂ ಕರ್ನಾಟಕ ಬಿಜೆಪಿ ಮನುವಾದಿ ಸಿದ್ಧಾಂತಕ್ಕೆ ಎತ್ತಿಂದೆತ್ತಣ ಸಂಬಂಧ? ಇತಿಹಾಸದ ಸತ್ಯಗಳನ್ನು ಮರೆಮಾಚಿ, ಬಾಬಾ ಸಾಹೇಬರ ಹೆಸರಿಗೆ ಮಸಿ ಬಳಿಯುವುದನ್ನು ಬಿಜೆಪಿ ನಿಲ್ಲಿಸದಿದ್ದರೆ, ಜನರು ತಕ್ಕ ಪಾಠ ಕಲಿಸುವುದು ಗ್ಯಾರಂಟಿ ಎಂದು ಟ್ವೀಟ್‌ ಮೂಲಕ ಕಾಂಗ್ರೆಸ್‌ ಮುಖಂಡ ಬಿ.ಕೆ.ಹರಿಪ್ರಸಾದ್‌ ಹೇಳಿದ್ದಾರೆ.

Advertisement

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಬಾಬಾ ಸಾಹೇಬರ ಹೆಸರಿನಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಇತಿಹಾಸದ ಸತ್ಯಗಳನ್ನು ಮರೆಮಾಚಿ, ಮೊಸಳೆ ಕಣ್ಣೀರು ಸುರಿಸುತ್ತಿರುವುದು ನಾಚಿಕೆಗೇಡು. ವಾಟ್ಸ್‌ಆ್ಯಪ್‌ ಯೂನಿವರ್ಸಿಟಿಯಲ್ಲಿ ಉತ್ಪಾದಿಸಿದ ಸುಳ್ಳುಗಳನ್ನು ಹರಿ ಬಿಟ್ಟಿರುವುದು, ಅಂಬೇಡ್ಕರ್‌ ಪರಿನಿರ್ವಾಣ ದಿನದಂದು ಬಾಬಾ ಸಾಹೇಬರಿಗೆ ಮಾಡಿದ ಅವಮಾನವಲ್ಲವೇ ಎಂದು ಬಿಜೆಪಿ ಕರ್ನಾಟಕವನ್ನು ಪ್ರಶ್ನಿಸಿದ್ದಾರೆ.

ಸಾರ್ವತ್ರಿಕ ಚುನಾವಣೆಯಲ್ಲಿ ಬಾಬಾ ಸಾಹೇಬರ ವಿರುದ್ಧ ಕಾಂಗ್ರೆಸ್‌ ಪಕ್ಷ ಸ್ಪರ್ಧಿಸಿದ್ದು ನಿಜ. ಅದೊಂದು ಚುನಾವಣಾ ಪ್ರಕ್ರಿಯೆ. ಆದರೆ, ಇಂದಿನ ಬಿಜೆಪಿಯ ಮುಖವಾಡವೇ ಆಗಿದ್ದ ಹಿಂದೂ ಮಹಾಸಭಾ, ಬಾಬಾ ಸಾಹೇಬರ ವಿರುದ್ಧ ಸ್ಪರ್ಧಿಸಿದ್ದು ಸುಳ್ಳಾ? ಬಾಬಾ ಸಾಹೇಬರಿಗೆ ಮತ ನೀಡಬೇಡಿ, ಹಿಂದೂ ವಿರೋಧಿಯೆಂದು ಪ್ರಚಾರ ಮಾಡಿದ್ದು ಸುಳ್ಳಾ? ಮನುವಾದಿ ಬಿಜೆಪಿಯ ಮುಖವಾಡವನ್ನು ಬಾಬಾ ಸಾಹೇಬರು ಅಂದೇ ಮನುಸ್ಮತಿಯನ್ನು ಸುಡುವ ಮೂಲಕ ದೇಶಕ್ಕೆ ಸಾರಿದ್ದು ಸುಳ್ಳಾ? ಮನುಷ್ಯ ವಿರೋಧಿ ಮನುಸ್ಮತಿಯನ್ನ ಸುಟ್ಟ ಸಿಟ್ಟಿಗೆ ಬಿಜೆಪಿ ಇಂದು ಸಂವಿಧಾನವನ್ನೇ ಬದಲಾವಣೆ ಮಾಡಲು ಬಂದಿದ್ದೇವೆ ಎಂದು ಬಹಿರಂಗವಾಗಿ ಹೇಳುತ್ತಿರುವುದು ನಿಜ ಅಲ್ಲವೇ ಎಂದು ಬಿಜೆಪಿಗೆ ಪ್ರಶ್ನಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next