Advertisement

ಇಂದಿರಾ ಕ್ಯಾಂಟೀನ್‌ಗೆ ಕಲ್ಲು

11:54 AM May 14, 2018 | Team Udayavani |

ಬೆಂಗಳೂರು: ನಗರದಲ್ಲಿರುವ ಶ್ರಮಿಕರು, ಬಡವರು ಮತ್ತು ಕೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಆಹಾರ ನೀಡುವ ಉದ್ದೇಶದಿಂದ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ಗೆ ಕಿಡಿಗೇಡಿಗಳು ಕಲ್ಲು ಹೊಡೆದ ಘಟನೆ ನಗರದ ಚಂದ್ರಲೇಔಟ್‌ನ ಅತ್ತಿಗುಪ್ಪೆ ವಾರ್ಡ್‌ನಲ್ಲಿ ನಡೆದಿದೆ.

Advertisement

ಪ್ರತಿದಿನದಂತೆ ಭಾನುವಾರ ಮಧ್ಯಾಹ್ನದ ಆಹಾರ ವಿತರಣೆ ಸಮಯ ಮುಗಿದ ಬಳಿಕ ಸಿಬ್ಬಂದಿ ಕ್ಯಾಂಟೀನ್‌ಗೆ ಬೀಗ ಹಾಕಿ ಹೋಗಿದ್ದರು. ಈ ವೇಳೆ ಕಾರಿನಲ್ಲಿ ಬಂದ ಕೆಲ ಕಿಡಿಗೇಡಿಗಳು ಕ್ಯಾಂಟೀನ್‌ನತ್ತ ಕಲ್ಲು ಎಸೆದು ಕಿಟಕಿ ಗಾಜುಗಳನ್ನು ಪುಡಿಗಟ್ಟಿ ಪರಾರಿಯಾಗಿದ್ದಾರೆ.

ರಾತ್ರಿ ಊಟ ವಿತರಿಸಲು 7.30ರ ಸುಮಾರಿಗೆ ಸಿಬ್ಬಂದಿ ಕ್ಯಾಂಟೀನ್‌ಗೆ ಬಂದಾಗ ಗಾಜು ಒಡೆದಿರುವುದನ್ನು ಕಂಡು, ಕ್ಯಾಂಟೀನ್‌ಗೆ ಅಳವಡಿಸಿರುವ ಸಿಸಿಟಿವಿ ಪರಿಶೀಲಿಸಿದಾಗ ಕಿಡಿಗೇಡಿಗಳು ಕಲ್ಲುಹೊಡೆದಿರುವುದು ಕಂಡು ಬಂದಿದೆ. ಕೂಡಲೆ ಬಿಬಿಎಂಪಿ ಹಿರಿಯ ಅಧಿಕಾರಿಗಳಿಗೆ ಸಿಬ್ಬಂದಿ, ಚಂದ್ರಲೇಔಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next