Advertisement

ಹುಬ್ಬಳ್ಳಿ ಪಾಲಿಕೆಯ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಮಾನಸಿಕ ಅಸ್ವಿಸ್ಥ

03:56 PM May 26, 2022 | Team Udayavani |

ಹುಬ್ಬಳ್ಳಿ: ಇಲ್ಲಿನ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿ ಮೇಲೆ ಹಾಗೂ ಆವರಣ ಬಳಿ ನಿಲ್ಲಿಸಿದ್ದ ವಾಹನಗಳ ಮೇಲೆ ಮಾನಸಿಕ ಅಸ್ವಸ್ಥನೊಬ್ಬ ಕಲ್ಲುತೂರಾಟ ನಡೆಸಿ ಕಚೇರಿಯ ಕಿಟಕಿಯ ಗಾಜು ಹಾಗೂ ವಾಹನಗಳ ಗಾಜುಗಳಿಗೆ ಹಾನಿಪಡಿಸಿದ್ದಾನೆ.

Advertisement

ಗಣೇಶ ಪೇಟೆ ನಿವಾಸಿ ಮೊಹಮದ್ ಹನೀಫ ಖೈರಾತಿ ಎಂಬಾತ ಗುರುವಾರ ಬೆಳಗ್ಗೆ ಮಹಾನಗರ ಪಾಲಿಕೆ ಕಚೇರಿಗೆ ಬಂದವನೇ ಕಲ್ಲುಗಳಿಂದ ಕಚೇರಿಯ ಕಿಟಕಿ ಹಾಗೂ ಎರಡು ಕಾರು, ಒಂದು ಟಿಪ್ಪರ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿದ್ದಾನೆ. ತಕ್ಷಣ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಅವನನ್ನು ತಡೆಡಿದ್ದಾರೆ.

ಇದನ್ನೂ ಓದಿ:ಬನಶಂಕರಿ: ಸ್ಕೂಲ್ ಬಸ್ ಢಿಕ್ಕಿಯಾಗಿ 16 ವರ್ಷದ ಬಾಲಕಿ ಸ್ಥಳದಲ್ಲೇ ಸಾವು

ಉಪನಗರ ಪೊಲೀಸರು ಆಗಮಿಸಿ ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬೈಕ್ ನಲ್ಲಿ ಬಂದಿದ್ದ ಮೊಹ್ಮದನು ಪಾಲಿಕೆ ಆಯುಕ್ತರನ್ನು ಅವಾಚ್ಯವಾಗಿ ನಿಂದಿಸುತ್ತ, ಏಕಾಏಕಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಈ ವೇಳೆ ಮೂರು ವಾಹನಗಳ ಗ್ಲಾಸ್ ಸಂಪೂರ್ಣ ಹಾನಿಯಾಗಿವೆ.

Advertisement

ಈತನ ಈ ದುಂಡಾ ವರ್ತನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿಚಾರಣೆ ನಡೆಸಲಾಗುತ್ತಿದೆ ಎಂದು ಉಪನಗರ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next