Advertisement

ಉದ್ಘಾಟನೆಗೂ ಮುನ್ನ ವಂದೇ ಭಾರತ್‌ಗೆ ಕಲ್ಲು

08:42 PM Jan 12, 2023 | Team Udayavani |

ವಿಶಾಖಪಟ್ಟಣ: ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ನ ಕೋಚ್‌ ಮೇಲೆ ಕಲ್ಲು ಎಸೆಯಲಾಗಿದ್ದು,  ಕಿಟಕಿಯ ಗಾಜು ಪುಡಿ ಆಗಿದೆ.

Advertisement

ಘಟನೆ ಸಂಬಂಧ ಮೂವರನ್ನು  ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಕಂದರಾಬಾದ್‌ ಮತ್ತು ವಿಶಾಖಪಟ್ಟಣ ನಡುವೆ ಸಂಚರಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಜ.15ರಂದು ವರ್ಚುಯಲ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ  ಹಸಿರು ನಿಶಾನೆ ತೋರಲಿದ್ದಾರೆ.

ರೈಲ್ವೆ ರಕ್ಷಣಾ ಪಡೆಯ ಪ್ರಾಥಮಿಕ ವರದಿ ಪ್ರಕಾರ, ಕಂಚರಪಾಲೆಂನ ಕೋಚ್‌ ಸಂಕೀರ್ಣದಲ್ಲಿ ನಿಂತಿದ್ದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಕಿಟಕಿಗಳ ಮೇಲೆ ಮೂವರು ಆರೋಪಿಗಳು ಬುಧವಾರ ರಾತ್ರಿ ಕಲ್ಲು ತೂರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next