Advertisement

ಶೂಟಿಂಗ್‌, ಬಿಡುಗಡೆ ಮೂಡ್‌ನಿಂದ ಸ್ಯಾಂಡಲ್‍ವುಡ್ ದೂರ

03:14 PM Nov 09, 2021 | Team Udayavani |

ಪುನೀತ್‌ ಅಕಾಲಿಕ ನಿಧನದಿಂದ ಇಡೀ ಚಿತ್ರರಂಗ ಶಾಕ್‌ಗೆ ಒಳಗಾಗಿದ್ದು, ಪುನೀತ್‌ ನಿಧನದ ದಿನ ಮುಂದೂಡಲಾಗಿರುವ ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ. ಅದರಲ್ಲೂ ಬಹುತೇಕ ಸ್ಟಾರ್‌ ನಟರು ಇನ್ನೂ ಶೂಟಿಂಗ್‌ ಮೂಡ್‌ಗೆ ಬಾರದೇ ಇರುವುದರಿಂದ ಸ್ಟಾರ್‌ ಸಿನಿಮಾಗಳ ಚಿತ್ರೀಕರಣ ಮುಂದಕ್ಕೆ ಹೋಗಿದೆ. ಜೊತೆಗೆ ಸಿನಿಮಾಗಳ ಬಿಡುಗಡೆ ಯಲ್ಲೂ ವ್ಯತ್ಯಯವಾಗಿದೆ.

Advertisement

ಸೂತಕದ ಛಾಯೆಯಲ್ಲಿ ಸಿನಿಮಾ ಚಿತ್ರೀಕರಣ, ಬಿಡುಗಡೆ ಬೇಡ ಎಂದು ನಿರ್ಧರಿಸಿರುವ ಕೆಲವು ಸಿನಿಮಾ ತಂಡಗಳು ಚಿತ್ರೀಕರಣ, ಬಿಡುಗಡೆಯನ್ನು ಮುಂದಕ್ಕೆ ಹಾಕಿವೆ.

ಗಣೇಶ್‌ ನಟನೆಯ “ಸಖತ್‌’ ಚಿತ್ರ ನ.12ಕ್ಕೆ ತೆರೆಕಾಣಬೇಕಿತ್ತು. ಆದರೆ, ಪುನೀತ್‌ ನಿಧನದ ಹಿನ್ನೆಲೆಯಲ್ಲಿ ಚಿತ್ರತಂಡ ಬಿಡುಗಡೆ ಯನ್ನು ನ.26ಕ್ಕೆ ಮುಂದೂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next