Advertisement

ವಿಷ್ಣುವರ್ಧನ್ ವೀರಪ್ಪ ನಾಯಕ ಪಾತ್ರಕ್ಕೆ ಪುತ್ಥಳಿ ರೂಪ

11:31 AM Jan 13, 2022 | Team Udayavani |

ಸಾಹಸಸಿಂಹ ವಿಷ್ಣುವರ್ಧನ್‌ ಅಭಿನಯದ “ವೀರಪ್ಪನಾಯಕ’ ಸಿನಿಮಾವನ್ನು ಬಹುತೇಕರು ನೋಡಿರುತ್ತೀರಿ. ಈ ಸಿನಿಮಾದಲ್ಲಿ ವಿಷ್ಣುವರ್ಧನ್‌ ನಿರ್ವಹಿಸಿರುವ “ವೀರಪ್ಪನಾಯಕ’ ಪಾತ್ರ ಅನೇಕರ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದಿದೆ. ಡಾ.ವಿಷ್ಣುವರ್ಧನ್‌ ಅವರ ಈ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ಸಹ ಒಲಿದು ಬಂದಿತ್ತು. ಭಾರತ ಕ್ರಿಕೆಟ್‌ ತಂಡದ ವಿದೇಶ ಪ್ರವಾಸಕ್ಕೂ ಮುನ್ನ ಅಂದಿನ ಪ್ರಧಾನಿ ವಾಜಪೇಯಿ ಅವರು ನಮ್ಮ ಕ್ರಿಕೆಟಿಗರಿಗೆ ಈ ಸಿನಿಮಾ ತೋರಿಸಿ ಅವರಲ್ಲಿ ದೇಶಪ್ರೇಮದ ಉತ್ಸಾಹವನ್ನು ತುಂಬಿ ಕಳುಹಿಸಿದ್ದನ್ನು ಕನ್ನಡಿಗರು ಮರೆಯುವಂತಿಲ್ಲ.

Advertisement

ದೇಶಪ್ರೇಮವನ್ನು ಅತ್ಯಂತ ಪರಿಣಾಮಕಾರಿಯಾಗಿ ತೋರಿದ ಸಿನಿಮಾ ಇಂದಿಗೂ ಸಿನಿಪ್ರಿಯರಿಗೆ ಅಚ್ಚುಮೆಚ್ಚು. ಇದೀಗ ಸಾಹಸಸಿಂಹ ವಿಷ್ಣುವರ್ಧನ್‌ ಅಭಿನಯದ “ವೀರಪ್ಪನಾಯಕ’ ಪಾತ್ರವನ್ನು ಅವರ ಅಭಿಮಾನಿಗಳು ಪುತ್ಥಳಿ ರೂಪದಲ್ಲಿ ಪ್ರತಿಷ್ಠಾಪಿಸಲು ಮುಂದಾಗಿದ್ದಾರೆ. ವರ್ಣಸಿಂಧು ಎಂಬ ಶಿಲ್ಪಿಯು ಈ ಪುತ್ಥಳಿಗೆ ಜೀವ ತುಂಬಿದ್ದಾ. ಈ “ವೀರಪ್ಪನಾಯಕ’ ಪಾತ್ರವನ್ನು ಪುತ್ಥಳಿ ರೂಪದಲ್ಲಿಯೂ ಜೀವಂತವಾಗಿಡುವ ಪ್ರಯತ್ನಕ್ಕೆ ಡಾ.ವಿಷ್ಣು ಸೇನಾ ಸಮಿತಿ ಅಗತ್ಯ ಹಣಕಾಸು ನೆರವು ನೀಡಿದೆ.

ಅಂದಹಾಗೆ, ಈಗಾಗಲೇ ಸಿದ್ಧವಾಗಿರುವ ವಿಷ್ಣುವರ್ಧನ್‌ ಅವರ “ವೀರಪ್ಪನಾಯಕ’ ಪಾತ್ರದ ಪುತ್ಥಳಿ, ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬ್ರಹ್ಮಸಂದ್ರದಲ್ಲಿ ಇದೇ ಜ. 19ರಂದು ಬೆಳಿಗ್ಗೆ ಅನಾವರಣವಾಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next