Advertisement

ಹಣದುಬ್ಬರ ನಿಯಂತ್ರಣಕ್ಕೆ ರಾಜ್ಯಗಳ ಕೊಡುಗೆ ಬೇಕು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

08:28 PM Sep 08, 2022 | Team Udayavani |

ನವದೆಹಲಿ: ಹಣದುಬ್ಬರ ಪ್ರಮಾಣವನ್ನು ತಗ್ಗಿಸುವುದು ಕೇವಲ ಕೇಂದ್ರದ ಜವಾಬ್ದಾರಿ ಅಲ್ಲ. ರಾಜ್ಯಗಳೂ ಕೂಡ ಈ ನಿಟ್ಟಿನಲ್ಲಿ ಕೈಜೋಡಿಸಬೇಕಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ನವದೆಹಲಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶೇಷವಾಗಿ ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಅವರು ಈ ಪ್ರಸ್ತಾಪ ಮಾಡಿದ್ದಾರೆ. ಕೇಂದ್ರ ಸರ್ಕಾರ 2 ಬಾರಿ ತೈಲೋತ್ಪನ್ನಗಳ ಮೇಲೆ ಅಬಕಾರಿ ಸುಂಕ ಇಳಿಕೆ ಮಾಡಿದೆ ಎಂದು ಹೇಳಿಕೊಂಡರು. ಕೆಲವು ರಾಜ್ಯಗಳಲ್ಲಿ ಇರುವ ಹಣದುಬ್ಬರ ಪ್ರಮಾಣ ರಾಷ್ಟ್ರೀಯ ಮಟ್ಟಕ್ಕಿಂತ ಹೆಚ್ಚಾಗಿದೆ ಎಂದರು ನಿರ್ಮಲಾ ಸೀತಾರಾಮನ್‌.

ಧೈರ್ಯದ ನಿರ್ಧಾರ: ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಧೈರ್ಯದ ನಿರ್ಧಾರ ಕೈಗೊಂಡಿದ್ದಾರೆ ಎಂದು ವಿತ್ತ ಸಚಿವೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಣದುಬ್ಬರ ತಡೆವ ನಿಟ್ಟಿನಲ್ಲಿ ರಷ್ಯಾದಿಂದ ಆರು ಪಟ್ಟು ಹೆಚ್ಚು ಕಚ್ಚಾ ತೈಲ ಖರೀದಿಸಿದೆ ಎಂದರು.

ಇದೇ ವೇಳೆ, ಮುಂದಿನ ವರ್ಷದ ಫೆ.1ರಂದು ಮಂಡಿಸಲಿರುವ 2023-24ನೇ ಸಾಲಿನ ಮುಂಗಡ ಪತ್ರಕ್ಕೆ ವಿತ್ತ ಸಚಿವಾಲಯ ಅ.10ರಿಂದ ಸಿದ್ಧತೆ ಶುರು ಮಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next