Advertisement

ಶುಕ್ರವಾರ ಸಂಪುಟ ವಿಸ್ತರಣೆ ಸಾಧ್ಯತೆ : ದೆಹಲಿಗೆ ತೆರಳಲು ಕಾಲಾವಕಾಶ ಕೇಳಿದ ಬೊಮ್ಮಾಯಿ

01:19 PM Jul 28, 2021 | Team Udayavani |

ಬೆಂಗಳೂರು : ಇಂದು (ಬುಧವಾರ) ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟವನ್ನು ಶುಕ್ರವಾರ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Advertisement

ಇನ್ನು ನೂತನ ಸಿಎಂ ಬೊಮ್ಮಾಯಿ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ದೆಹಲಿಗೆ ತೆರಳಲು ಹೈಕಮಾಂಡ್ ನಿಂದ ಸಮಯ ಕೇಳಿದ್ದಾರೆ. ದೆಹಲಿ ನಾಯಕರ ಜೊತೆ ಮತ್ತು ರಾಜ್ಯ ಬಿಜೆಪಿ ಪ್ರಮುಖರ ಜೊತೆ ಚರ್ಚೆ ನಡೆಸಿ ಮುಂಬರುವ ಶುಕ್ರವಾರದಂದು ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ ವಿಸ್ತರಣೆಯಲ್ಲಿ 15 ಜನ ಸಂಪುಟ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next