Advertisement

ರಾಜ್ಯ ಬಿಜೆಪಿ ವಿಸ್ತಾರಕರಿಗೆ ಬೈಕ್‌ ವಿತರಣೆ

06:50 AM Dec 30, 2017 | |

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ಪರ ಚುನಾವಣಾ ತಯಾರಿ ನಡೆಸುತ್ತಿರುವ ವಿಸ್ತಾರಕರಿಗೆ ಬೈಕ್‌
ಗಳನ್ನು ವಿತರಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. 

Advertisement

ಶುಕ್ರವಾರ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಎಂಟು ವಿಸ್ತಾರಕರಿಗೆ ಬಿಜೆಪಿ ರಾಜ್ಯ ಮುಖಂಡ ಅರುಣ್‌ ಬೈಕ್‌
ಹಸ್ತಾಂತರಿಸಿದರು. ಉತ್ತರಪ್ರದೇಶದ ಚುನಾವಣೆಯಲ್ಲಿ ವಿಸ್ತಾರಕ ಯೋಜನೆಯಲ್ಲಿ ಬಳಸಲಾಗಿದ್ದ ಈ ಬೈಕ್‌ಗಳನ್ನು
ಇದೀಗ ಸಾರಿಗೆ ಇಲಾಖೆಯ ನಿಯಮಾವಳಿಯಡಿ ರಾಜ್ಯದ ತೆರಿಗೆ ಪಾವತಿಸಿ ರಾಜ್ಯದ ರಸ್ತೆಗೆ ಇಳಿಸಲಾಗಿದೆ.

ಚುನಾವಣೆ ಮುಗಿಯುವವರೆಗೂ ವಿಸ್ತಾರಕರು ಆಯಾ ಕ್ಷೇತ್ರಗಳಲ್ಲಿ ಬೂತ್‌ ಸಶಕ್ತೀಕರಣ ಕಾರ್ಯದಲ್ಲಿ ತಮ್ಮನ್ನು
ಸಂಪೂರ್ಣ ತೊಡಗಿಸಿಕೊಳ್ಳಲು ಇದು ಸಹಕಾರಿಯಾಗಲಿದೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next