Advertisement
ಸರ್ಕಾರದಿಂದ 100% ಪ್ರೇಕ್ಷಕರ ಪ್ರವೇಶಾವಕಾಶಕ್ಕೆ ಅನುಮತಿ ಹೊರಬೀಳುತ್ತಿದ್ದಂತೆ, ಸ್ಯಾಂಡಲ್ ವುಡ್ನಲ್ಲಿ ಸಿನಿಮಾಗಳ ಬಿಡುಗಡೆ ತಯಾರಿ ಕೂಡ ಜೋರಾಗುತ್ತಿದೆ. ಒಂದೆಡೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ತಮ್ಮ ರಿಲೀಸ್ ಡೇಟ್ ಅನೌನ್ಸ್ ಮಾಡಿಕೊಳ್ಳುತ್ತಿದ್ದರೆ, ಮತ್ತೂಂದೆಡೆ ಥಿಯೇಟರ್ ಮಾಲೀಕರು ಕೂಡ ಬಿಡುಗಡೆಯಾಗಲಿರುವ ಸಿನಿಮಾಗಳಿಗೆ ತಮ್ಮ ಥಿಯೇಟರ್ನಲ್ಲಿ ಬೇಕಾದ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅಕ್ಟೋಬರ್ ಮೊದಲ ವಾರದಿಂದಲೇ ರಾಜ್ಯದ ಎಲ್ಲ ಥಿಯೇಟರ್ ಗಳಲ್ಲೂ ಸಿನಿಮಾಗಳು ಮತ್ತೆ ಮೊದಲಿನಂತೆಯೇ ಪ್ರದರ್ಶನವಾಗುತ್ತವೆ ಎಂದು ಹೇಳಲಾಗದು.
Related Articles
Advertisement
ಹೊಂದಾಣಿಕೆಯಿಂದ ಸಿನಿಮಾ ರಿಲೀಸ್ ಮಾಡಿ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರವೇಶಾತಿಗೆ ಅನುಮತಿ ಸಿಕ್ಕ ಬೆನ್ನಲ್ಲೇ ಮೂರು ಸ್ಟಾರ್ ಸಿನಿಮಾಗಳು ಬಿಡುಗಡೆಯ ದಿನಾಂಕ ಘೋಷಿಸಿವೆ. ಅದರಲ್ಲೂ “ಸಲಗ’ ಹಾಗೂ “ಕೋಟಿಗೊಬ್ಬ-3′ ಚಿತ್ರಗಳು ಅಕ್ಟೋಬರ್ 14ರಂದು ಬರಲಿವೆ. ಎರಡು ಸ್ಟಾರ್ ಸಿನಿಮಾಗಳು ಒಂದೇ ಬರುವ ಘೋಷಣೆ ಮಾಡಿದ್ದು, ಅಚ್ಚರಿಗೆ ಕಾರಣವಾಗಿದೆ. ಈ ಬಗ್ಗೆ ನಟ ಶಿವರಾಜ್ಕುಮಾರ್ ಮಾಧ್ಯಮ ಜೊತೆ ಮಾತನಾಡಿದ್ದು, “ಪ್ರತಿಯೊಬ್ಬ ನಿರ್ಮಾಪಕರಿಗೂ ತಾವು ಹಾಕಿರುವ ಬಂಡವಾಳ ವಾಪಾಸ್ ಬರಬೇಕೆಂಬ ಆಸೆ ಇರುತ್ತದೆ. ಈ ನಿಟ್ಟಿನಲ್ಲಿ ಹೊಂದಾಣಿಕೆಯಿಂದ ಸಿನಿಮಾ ಬಿಡುಗಡೆ ಮಾಡಿದರೆ ಒಳ್ಳೆಯದು. ಇಲ್ಲಿ ಎಲ್ಲರೂ ನಮ್ಮವರೇ. ನನ್ನ ಪ್ರಕಾರ, ತೊಂದರೆಯಾಗದಂತೆ ಇಬ್ಬರು ನಿರ್ಮಾಪಕರು ಮಾತನಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ’ ಎನ್ನುವುದು ಶಿವಣ್ಣ ಮಾತು. ಚಿತ್ರಮಂದಿರಕ್ಕೆ ಬರುವ ಅಭಿಮಾನಿಗಳು ಕೂಡಾ ಕೋವಿಡ್ ಕಡಿಮೆಯಾಗುವವರೆಗೆ ಮುನ್ನೆಚ್ಚರಿಕೆ ವಹಿಸಬೇಕು ಎಂಬ ಕಿವಿ ಮಾತು ಹೇಳಿದರು
ನಮ್ಮ ಮನವಿಗೆ ಸ್ಪಂದಿಸಿ ಸರ್ಕಾರ 100% ಪ್ರೇಕ್ಷಕರ ಪ್ರವೇಶಾತಿಗೆ ಅವಕಾಶ ಕೊಟ್ಟಿದ್ದು ಖುಷಿಯಿದೆ. ಸರ್ಕಾರದ ಮಾರ್ಗಸೂಚಿಯಂತೆ ಥಿಯೇಟರ್ಗಳಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಆದ್ರೆ ಈಗಾಗಲೇ ಸಿನಿಮಾಗಳಿಲ್ಲದೆ ಸ್ಥಗಿತಗೊಳಿಸಿರುವ ಥಿಯೇಟರ್ಗಳು ತಕ್ಷಣವೇ ಮತ್ತೆ ಪ್ರದರ್ಶನ ಶುರು ಮಾಡುತ್ತವೆ ಎಂದು ಹೇಳಲಾಗದು. ಸದ್ಯದ ಪರಿಸ್ಥಿತಿಯಲ್ಲಿ ಥಿಯೇಟರ್ಗಳನ್ನು ತೆರೆದರೂ, ಬೇಕಾದಷ್ಟು ಸಿನಿಮಾ ಕಂಟೆಂಟ್ ಇಲ್ಲ. ಅದರಲ್ಲೂ ಎರಡು-ಮೂರು ಬಿಗ್ ಸ್ಟಾರ್ ಸಿನಿಮಾಗಳು ರಿಲೀಸ್ ಆದ ಮೇಲಷ್ಟೇ ಪ್ರೇಕ್ಷಕರು ಥಿಯೇಟರ್ಗಳಿಗೆ ಬರೋದಕ್ಕೆ ಶುರು ಮಾಡುತ್ತಾರೆ. ಹಾಗಾಗಿ ಬಿ ಮತ್ತು ಸಿ ಸೆಂಟರ್ಗಳು ಮತ್ತೆ ಮೊದಲಿನಂತಾಗಲೂ ಕನಿಷ್ಟ ಮೂರು-ನಾಲ್ಕು ವಾರಗಳಾದ್ರೂ ಬೇಕಾಗುತ್ತದೆ.
-ಕೆ. ವಿ ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಸಧ್ಯಕ