Advertisement

ನಾಡಿಗೆ ಬಂದ ಸಾರಂಗ ರಕ್ಷಣೆ

06:43 PM Jul 10, 2021 | Team Udayavani |

ಬೆಳಗಾವಿ: ಖಾನಾಪುರ ತಾಲೂಕಿನ ನಾಗರಗಾಳಿ ಅರಣ್ಯದಿಂದ ಆಹಾರ ಹುಡುಕುತ್ತ ಕರ್ಜಗಿ ಗ್ರಾಮದೊಳಗೆ ಬಂದ ಸಾರಂಗವನ್ನು ರಕ್ಷಿಸಿದ ಗ್ರಾಮಸ್ಥರು ಅದನ್ನು ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಮರಳಿ ಅರಣ್ಯದೊಳಗೆ ಬಿಟ್ಟಿದ್ದಾರೆ.

Advertisement

ಕರ್ಜಗಿ ಗ್ರಾಮಕ್ಕೆ ಬಂದ ಸಾರಂಗವನ್ನು ಗಮನಿಸಿದ ಬೀದಿ ನಾಯಿಗಳು ಅದರ ಮೇಲೆ ಹಲ್ಲೆಗೆ ಮುಂದಾಗಿದ್ದವು. ಜೀವ ಭಯದಿಂದ ಸಾರಂಗ ಗ್ರಾಮದ ಮನೆಯೊಂದಕ್ಕೆ ನುಗ್ಗಿತ್ತು. ಮನೆಯ ಸದಸ್ಯರು ಅದನ್ನು ನಾಯಿಗಳಿಂದ ರಕ್ಷಿಸಿ ಗ್ರಾಮಸ್ಥರಿಗೆ ವಿಷಯ ತಿಳಿಸಿದರು.

ಗ್ರಾಮಸ್ಥರು ಅದೇ ಗ್ರಾಮದ ನಿವಾಸಿ ಹಾಗೂ ಮಾಜಿ ಶಾಸಕ ಅರವಿಂದ ಪಾಟೀಲ ಅವರ ಗಮನಕ್ಕೆ ಈ ವಿಷಯ ತಂದಿದ್ದಾರೆ. ಅರಣ್ಯ ಇಲಾಖೆ ಅ ಧಿಕಾರಿಗಳ ಜೊತೆ ಗ್ರಾಮಕ್ಕೆ ಅರವಿಂದ ಪಾಟೀಲ ಭೇಟಿ ನೀಡಿದರು. ನಂತರ ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಿ ಮರಳಿ ಅರಣ್ಯಕ್ಕೆ ಬಿಡಲಾಗಿದೆ ಎಂದು ಉಪ ವಲಯ ಅರಣ್ಯ ಅ ಧಿಕಾರಿ ಎನ್‌.ಜಿ. ಹಿರೇಮಠ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next