Advertisement

ಚೂರಿಯಿಂದ ಇರಿದು ಪತ್ನಿ ಕೊಲೆ

11:58 PM Apr 20, 2019 | Team Udayavani |

ಮಂಗಳೂರು:ದೇರೆಬೈಲ್‌ ಕೊಂಚಾಡಿ ಸಮೀಪದ ಬೋರು ಗುಡ್ಡೆಯಲ್ಲಿ ಶನಿವಾರ ಮುಂಜಾನೆ ವ್ಯಕ್ತಿಯೋರ್ವ ಪತ್ನಿಯನ್ನು ಚೂರಿಯಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ.

Advertisement

ಬಾಗಲಕೋಟೆ ಮೂಲದ ಮಂಜುಳಾ (38)ರನ್ನು ಆಕೆಯ ಪತಿ ಶರಣಪ್ಪ (49) ಕೊಲೆ ಮಾಡಿದ್ದಾನೆಂದು ಗುರುತಿಸಲಾಗಿದೆ.

ಕೃತ್ಯದ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ಶನಿವಾರ ಸಂಜೆ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದ್ದು, ಪೊಲೀಸರು ಇದನ್ನು ಖಚಿತಪಡಿಸಿಲ್ಲ.

ಪ್ರಕರಣದ ವಿವರ
ಬಾಗಲಕೋಟೆ ಮೂಲದ ಶರಣಪ್ಪ ಮತ್ತು ಮಂಜುಳಾ ದಂಪತಿ ಸುಮಾರು 15 ವರ್ಷಗಳ ಹಿಂದೆ ಮಂಗಳೂರಿಗೆ ಬಂದಿದ್ದು, ಕಾವೂರು ಠಾಣೆ ವ್ಯಾಪ್ತಿಯ ಬೋರುಗುಡ್ಡೆಯಲ್ಲಿ ಸ್ವಂತ ಮನೆ ಮಾಡಿ ವಾಸವಿದ್ದರು.ಶರಣಪ್ಪ ಮೇಸಿŒಯಾಗಿದ್ದು, ಮಂಜುಳಾ ಕುಂಟಿಕಾನದ ಖಾಸಗಿ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದರು.ದಂಪತಿಗೆ ನಾಲ್ವರು ಪುತ್ರಿಯರಿದ್ದು,ಒಬ್ಬ ಳಿಗೆ ಮದುವೆಯಾಗಿದೆ. ಇತರ ಮೂವರು ಪಿಯುಸಿ,ಎಸೆಸೆಲ್ಸಿ ಹಾಗೂ 8ನೇ ತರಗತಿಯಲ್ಲಿ ಓದುತ್ತಿದ್ದಾರೆ.

ಶರಣಪ್ಪ ಮದ್ಯ ಸೇವಿಸಿ ಪ್ರತಿ ದಿನ ಮನೆಯಲ್ಲಿ ಜಗಳವಾಡು ತ್ತಿದ್ದ. ಶುಕ್ರವಾರ ರಾತ್ರಿಯೂ ದಂಪ ತಿ ಮಧ್ಯೆ ಜಗಳವಾಗಿತ್ತು.ಪುತ್ರಿಯರು ಉಡುಪಿಯಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು.

Advertisement

ಮುಂಜಾನೆ ಸುಮಾರು 2 ಗಂಟೆ ವೇಳೆಗೆ ಶರಣಪ್ಪ ಮನೆಯಲ್ಲಿದ್ದ ಚೂರಿಯಿಂದ ಪತ್ನಿಗೆ ಬರ್ಬರವಾಗಿ ತಿವಿದಿದ್ದ. ಮಂಜುಳಾಳ ಬೊಬ್ಬೆ ಕೇಳಿ ಆಸುಪಾಸಿನವ ರು ಓಡಿ ಬಂದಿದ್ದು, ಆಗ ಶರಣಪ್ಪ ಪರಾರಿಯಾದ.ಮಂಜುಳಾ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದರು.ಸ್ಥಳೀಯರು ನೀಡಿದ್ದ ಮಾಹಿತಿಯಂತೆ ಕೂಡಲೇ ಕಾವೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು.ಕಾವೂರು ಇನ್‌ಸ್ಪೆಕ್ಟರ್‌ ಕಮಲಾಕರ ನಾಯಕ್‌ ತನಿಖೆ ನಡೆಸುತ್ತಿದ್ದಾರೆ.

ಶೀಲ ಶಂಕೆ ಕಾರಣ?
ಘಟನೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ.ಪತ್ನಿಗೆ ಬೇರೊಬ್ಬನೊಂದಿಗೆ ಸಂಬಂಧವಿದೆ ಎನ್ನುವ ಶಂಕೆ ಶರಣಪ್ಪ ನಿಗಿತ್ತು ಮತ್ತು ಇದೇ ಕಾರಣದಿಂದ ಪ್ರತಿ ದಿನ ಜಗಳವಾಗು ತ್ತಿತ್ತು ಎನ್ನಲಾಗಿದೆ.ಇದು ವಿಕೋಪಕ್ಕೆ ಹೋಗಿ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಿಂದ ಮಕ್ಕಳ ಸ್ಥಿತಿ ಅನಾಥವಾದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next