Advertisement

ಎಸ್‌ಟಿ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ

02:33 PM Jul 21, 2017 | Team Udayavani |

ಜಗಳೂರು: ಜಗಳೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ಮಾಜಿ ಅಧ್ಯಕ್ಷ ಎಸ್‌.ವಿ.ರಾಮಚಂದ್ರ ಅವರು ಬಿಜೆಪಿ ಎಸ್‌ಟಿ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

Advertisement

ದೆಹಲಿಯ ರಾಷ್ಟ್ರೀಯ ಬಿಜೆಪಿ ಕಚೇರಿಯಲ್ಲಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಅವರು, ಎಸ್‌ಟಿ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ ಮಾಡಿದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ, ಎಸ್‌ಟಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ರವಿಚಾರ್ಯ ನೇತಾರ, ಕರ್ನಾಟಕ ರಾಜ್ಯಾಧ್ಯಕ್ಷ ಬಿ.ಎಸ್‌ .ಯಡಿಯೂರಪ್ಪ, ಸಂಸದ ಜಿ.ಎಂ.ಸಿದ್ದೇಶ್ವರ ಕೃತಜ್ಞತೆ ಸಲ್ಲಿಸಿದರು.  ಆಂಧ್ರ ಪ್ರದೇಶ ಲಕ್ಷದ್ವೀಪಗಳ ರಾಜ್ಯಗಳ ಎಸ್‌.ಟಿ.ಮೋರ್ಚಾದ ಉಸ್ತುವಾರಿ ವಹಿಸಲಾಗಿದ್ದು, ಅಧಿಕಾರ ಸ್ವೀಕರಿಸುವ ವೇಳೆ ಎಸ್‌ಟಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ರವಿಚಾರ್ಯ ನೇತಾರ್‌, ಉಪಾಧ್ಯಕ್ಷ ಮಹಾರಾಷ್ಟ್ರದ ಅಶೋಕ ಮೇಟಿ, ಪ್ರಧಾನ ಕಾರ್ಯದರ್ಶಿಗಳಾದ ಗುಜರಾತ್‌ ಸಂಸದ ರಾಮ್‌ಸಿಂಗರಾವತ್‌, ಮಧ್ಯಪ್ರದೇಶ, ಸಂಸದ ಸುಭಾಷ್‌ ಪಾಟೀಲ, ರಾಜಸ್ಥಾನ ಸಂಸದ ಅರ್ಜುನ್‌ 
ಮೀನಾ, ಉತ್ತರಖಾಂಡದ ಡಾ, ಪ್ರೇಮಸಿಂಗ್‌ ಇತರರು.

Advertisement

Udayavani is now on Telegram. Click here to join our channel and stay updated with the latest news.

Next