Advertisement

ಲಕ್ಷ ರೂ. ಕಳೆದುಕೊಂಡ ವೃದ್ಧನಿಗೆ ಕೈಯಾರೆ ಹಣ ನೀಡಿದ ಎಸ್ಪಿ!

07:38 PM Nov 15, 2021 | Team Udayavani |

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ.

Advertisement

ರಸ್ತೆಬದಿಯಲ್ಲಿ ಕುಳಿತು ತಿನಿಸುಗಳು, ಕಾಳುಗಳನ್ನು ಮಾರುವ ವ್ಯಾಪಾರಿ ಅಬ್ದುಲ್‌ ರೆಹ್ಮಾನ್‌ (90) ತಮ್ಮ ಅಂತ್ಯಕ್ರಿಯೆಗೆಂದು 1 ಲಕ್ಷ ರೂ. ಕೂಡಿಟ್ಟಿದ್ದರು.

ಕಳ್ಳರು ಅದನ್ನು ಕಳವು ಮಾಡಿದ್ದರಿಂದ ದುಃಖಿತರಾಗಿದ್ದ ರೆಹ್ಮಾನ್‌ಗೆ ಹಿರಿಯ ಜಿಲ್ಲಾ ಎಸ್‌ಪಿ ಸಂದೀಪ್‌ ಚೌಧರಿ ತಮ್ಮ ಕೈಯಾರೆ 1 ಲಕ್ಷ ರೂ. ಹಣವನ್ನು ನೀಡಿ ಸಾಂತ್ವನ ಹೇಳಿದ್ದಾರೆ.

ಅಬ್ದುಲ್‌ ರೆಹ್ಮಾನ್‌ ಶ್ರೀನಗರದ ಬೊಹ್ರಿ ಕಡಲ್‌ ಪ್ರದೇಶದ ರಸ್ತೆಬದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದರು. ಏಕಾಂಗಿಯಾಗಿರುವ ಅವರು ತಮ್ಮ ಅಂತ್ಯಕ್ರಿಯೆಗೆ ಇರಲಿ ಎಂದು 1 ಲಕ್ಷ ರೂ. ಕೂಡಿಟ್ಟು, ಅದನ್ನು ತಮ್ಮೊಂದಿಗೇ ಇಟ್ಟುಕೊಂಡಿದ್ದರು.

ಇದನ್ನೂ ಓದಿ:ಇದು ಪಾರ್ಟಿ ಪೋಸ್ಟರ್‌ ಅಲ್ಲ.. ಮದುವೆ ಆಮಂತ್ರಣ!

Advertisement

ಈ ವಿಷಯವನ್ನು ತಿಳಿದ ಕಳ್ಳರು ರೆಹ್ಮಾನ್‌ಗೆ ಚೆನ್ನಾಗಿ ಬಾರಿಸಿ ಹಣವನ್ನು ಕದ್ದೊಯ್ದಿದ್ದಾರೆ. ಇಂತಹ ಅಮಾನವೀಯ ಕೃತ್ಯ ಬೆಳಕಿಗೆ ಬಂದ ಬೆನ್ನಲ್ಲೇ ಸಂದೀಪ್‌ ಚೌಧರಿ ಮಾನವೀಯತೆಯ ಬೆಳಕನ್ನು ಬೀರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next