Advertisement

ಎಸೆಸೆಲ್ಸಿ ಮರು ಪರೀಕ್ಷೆ ಅಕ್ರಮ: ಮೇಲ್ವಿಚಾರಕ ಅಮಾನತು

11:12 PM Sep 28, 2022 | Team Udayavani |

ಮುದ್ದೇಬಿಹಾಳ: ಎಸೆಸೆಲ್ಸಿ ಪೂರಕ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನ ವೇಳೆ ಮೈಸೂರಿನ ಮೌಲ್ಯಮಾಪನ ಕೇಂದ್ರವೊಂದರಲ್ಲಿ ಬೆಳಕಿಗೆ ಬಂದ ಪರೀಕ್ಷಾ ಅಕ್ರಮವೊಂದಕ್ಕೆ ಸಂಬಂಧಿಸಿ ಇಲ್ಲಿನ ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕರಾಗಿದ್ದ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಯರಝರಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಆರ್‌.ಎ.ಮೇರೆಕೋರ ಅವರನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರ (ಪರೀಕ್ಷೆಗಳು) ಸೂಚನೆ ಮೇರೆಗೆ ವಿಜಯಪುರ ಡಿಡಿಪಿಐ ಉಮೇಶ ಶಿರಹಟ್ಟಿಮಠ ಅವರು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

Advertisement

ಮುದ್ದೇಬಿಹಾಳದ ಅಭ್ಯುದಯ ಇಂಟರ್‌ನ್ಯಾಶನಲ್‌ ಸ್ಕೂಲ್‌ನ ಎಸೆಸೆಲ್ಸಿ ಪೂರಕ ಪರೀಕ್ಷೆ ಕೇಂದ್ರದಲ್ಲಿ ಜೂ.27ರಿಂದ ಜು.4ರ ವರೆಗೆ ಪರೀಕ್ಷೆಗಳು ನಡೆದಿದ್ದವು. ಅಲ್ಲಿ ಅಕ್ರಮ ನಡೆದಿತ್ತು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next