Advertisement

ಎಸ್‌ಎಸ್ ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ಆರಂಭ

11:40 AM Jun 01, 2021 | Team Udayavani |

ರಾಮನಗರ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಜಿಲ್ಲೆಯಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ಆರಂಭವಾಗಿದೆ. ಇಲಾಖೆಯ ಸೂಚನೆಯಂತೆ ಬಹುತೇಕ ಪೋಷಕರು ತಮ್ಮ ಮಕ್ಕಳ ಜೊತೆಗೆ ಇದ್ದು ಪರೀಕ್ಷೆ ಬರೆಸಿರುವುದಾಗಿ ತಿಳಿಸಿದ್ದಾರೆ.

Advertisement

ಕೋವಿಡ್‌ಕರ್ಫ್ಯೂಇರುವಕಾರಣಶಾಲೆಗಳಿಗೆ ರಜೆಇದೆ.ಎಸ್‌ ಎಸ್‌ಎಲ್‌ಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಎರಡು ಹಂತದ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಹಮ್ಮಿಕೊಂಡಿದೆ. ಮೊದಲ ಹಂತದ ಪರೀಕ್ಷೆ ಸೋಮವಾರದಿಂದ ಆರಂಭವಾಗಿದೆ.ಮೊದಲದಿನಪ್ರಥಮಭಾಷೆಪರೀಕ್ಷೆ ನಡೆದಿದೆ.

ಬೆಳಗ್ಗೆ 10 ಗಂಟೆಯ ವೇಳೆಗೆ ಪರೀಕ್ಷಾ ಪ್ರಶ್ನೆ ಪತ್ರಿಕೆ ಪೋಷಕರ ಮೊಬೈಲ್‌ ತಲುಪಿದೆ. ಮೊಬೈಲ್‌ನಲ್ಲಿ ಬಂದ ಪ್ರಶ್ನೆ ಪತ್ರಿಕೆ ಡೌನ್‌ ಲೋಡ್‌ ಮಾಡಿಕೊಂಡು ಪೋಷಕರ ಸಮ್ಮುಖದಲ್ಲಿ ಉತ್ತರ ಬರೆದಿದ್ದಾರೆ. ನೆಟ್‌ವರ್ಕ್‌ ತೊಂದರೆಯಿಂದ ಕೆಲವರಿಗೆ ಪ್ರಶ್ನೆ ಪತ್ರಿಕೆ ತಲುಪುವುದು ತಡವಾಗಿರುವ ಬಗ್ಗೆ ಆಯಾ ಶಾಲೆಗಳ ಮುಖ್ಯಶಿಕ್ಷಕರಿಗೆ ಪೋಷಕರು ಕರೆ ಮಾಡಿ ವಿಚಾರಿಸಿದ್ದಾರೆ. ಮನೆಯಲ್ಲೇ ಉತ್ತರ ಬರೆಯುತ್ತಿರುವ ಚಿತ್ರಗಳನ್ನು ಪೋಷಕರು ತಮ್ಮ ಮಗುವಿನ ಶಾಲೆಯ ಮುಖ್ಯಶಿಕ್ಷಕರಿಗೆ ರವಾನಿಸಿದ್ದಾರೆ.

ಇನ್ನು5ವಿಷಯಗಳ ಪರೀಕ್ಷೆ ಪ್ರತಿದಿನ ನಡೆಯಲಿದೆ. ಸೋಮವಾರ ಎಷ್ಟು ಮಂದಿ ಪರೀಕ್ಷೆ ಬರೆದಿದ್ದಾರೆ ಎಂಬ ಮಾಹಿತಿ ಇದ್ದಷ್ಟೆ  ಸಂಗ್ರಹವಾಗಬೇಕಾದಿದೆ. ಸರ್ಕಾರಿ, ಖಾಸಗಿ ಅನುದಾನಿತ, ಅನು ದಾನರಹಿತ ಶಾಲಾ ವಿದ್ಯಾರ್ಥಿಗಳು ಸಹ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next