Advertisement

ಎಸೆಸೆಲ್ಸಿ ಪರೀಕ್ಷೆ ಆರಂಭ: 817 ಮಂದಿ ಗೈರು

09:50 AM Mar 24, 2018 | Team Udayavani |

ಮಂಗಳೂರು/ ಉಡುಪಿ: ಎಸೆಸೆಲ್ಸಿ ಪರೀಕ್ಷೆಯ ಮೊದಲ ದಿನವಾದ ಮಾ. 23ರಂದು ದ.ಕ. ಜಿಲ್ಲೆಯಲ್ಲಿ 590 ಮತ್ತು ಉಡುಪಿ ಜಿಲ್ಲೆಯಲ್ಲಿ 227 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ಮೊದಲ ದಿನ ನಡೆದ ಪ್ರಥಮ ಭಾಷೆ ಪರೀಕ್ಷೆಗೆ ದ.ಕ. 29,611 ವಿದ್ಯಾರ್ಥಿಗಳು ಮತ್ತು ಉಡುಪಿಯಲ್ಲಿ 13,541 ಮಂದಿ ಹಾಜರಾಗಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ಯಾವುದೇ ವಿದ್ಯಾರ್ಥಿಗಳು ಡಿಬಾರ್‌ ಆಗಿಲ್ಲ.

Advertisement

ಅಕ್ಷರ ದೋಷ: ಕನ್ನಡ ಭಾಷೆಯ ಪ್ರಶ್ನೆ ಪತ್ರಿಕೆಯ ಪ್ರಶ್ನೆಯೊಂದರಲ್ಲಿ ‘ಭಗತ್‌ ಸಿಂಗ್‌’ ಬದಲು “ಭರತ್‌ ಸಿಂಗ್‌’ ಎಂದು ಮುದ್ರಣವಾಗಿತ್ತು. ಇದನ್ನು ಹೊರತುಪಡಿಸಿದರೆ ಅಂತಹ ಗೊಂದಲಗಳಿರಲಿಲ್ಲ. ಕನ್ನಡ ಪತ್ರಿಕೆ ಹೆಚ್ಚು ಕಠಿನವಾಗಿರಲಿಲ್ಲ ಎಂದು ಶಿಕ್ಷಕರೋರ್ವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next