Advertisement

25 ಕೋಟಿ ರೂ. ಲಂಚ ಕೇಳಿದ್ದ ಸಮೀರ್‌ ವಾಂಖೆಡೆ: ಸಿಬಿಐ ಆರೋಪ

11:57 PM May 15, 2023 | Team Udayavani |

ಹೊಸದಿಲ್ಲಿ: ಬಾಲಿವುಡ್‌ ನಟ ಶಾರುಕ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಪುತ್ರನ್ನು ಡ್ರಗ್ಸ್‌ ಕೇಸ್‌ನಿಂದ ಪಾರು ಮಾಡಲು ಐಆರ್‌ಎಸ್‌ ಅಧಿಕಾರಿ ಸಮೀರ್‌ ವಾಂಖೆಡೆ 25 ಕೋಟಿ ರೂ. ಲಂಚ ಕೇಳಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

Advertisement

ಲಂಚ ನೀಡದೆ ಇದ್ದರೆ ಪ್ರಕರಣದಲ್ಲಿ ಶಾರು ಕ್‌ ಪುತ್ರನನ್ನು ಸಿಲುಕಿಸುವ ಬೆದರಿಕೆಯನ್ನು ವಾಂಖೆಡೆ ಒಡ್ಡಿದ್ದರು ಎಂದು ಕೇಂದ್ರ ತನಿಖಾ ಸಂಸ್ಥೆಯ ಎಫ್ಐಆರ್‌ನಲ್ಲಿ ಹೇಳಿಕೊಂಡಿದೆ. ಜತೆಗೆ ಪ್ರಕರಣದಲ್ಲಿ ಸಾಕ್ಷಿಯಾಗಿರುವ ಕೆ.ಪಿ. ಗೋಸಾವಿ ಅವರಿಗೆ ಮುಕ್ತವಾಗಿ ವ್ಯವಹರಿಸಲೂ ಅವಕಾಶ ಕಲ್ಪಿಸಲಾಗಿತ್ತು.

ವಾಂಖೆಡೆ ಬಳಿ ದುಬಾರಿ ವಾಚ್‌ಗಳಿವೆ ಮತ್ತು ಪದೇ ಪದೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಅದರ ಬಗ್ಗೆ ಸೂ ಕ್ತ ವಿವರಣೆ ನೀಡಿಲ್ಲವೆಂದೂ ಆರೋಪಿಸಲಾಗಿದೆ. ಆದರೆ ಈ ಆರೋಪಗಳೆಲ್ಲ ಸುಳ್ಳು ಎಂದು ವಾಂಖೆಡೆ ಪತ್ನಿ ಹೇಳಿದ್ದಾರೆ. 2021 ಅಕ್ಟೋಬರ್‌ನಲ್ಲಿ ಆರ್ಯನ್‌ನನ್ನು ಬಂಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next