Advertisement

ಶ್ರೀರಂಗಪಟ್ಟಣ: ಪ್ರತ್ಯೇಕ ಘಟನೆಯಲ್ಲಿ 3 ಸಾವು

05:32 PM Nov 28, 2021 | Team Udayavani |

ಶ್ರೀರಂಗಪಟ್ಟಣ: ಸ್ನೇಹಿತರ ಜೊತೆ ಪ್ರವಾಸಕ್ಕೆಂದು ಬಂದಿದ್ದ ಯುವಕನೋರ್ವ ತಾಲೂ ಕಿನ ಗಂಜಾಮ್ ಬಳಿ ಇರುವ ಕಾವೇರಿ ಸಂಗಮದಲ್ಲಿನ ಕಾವೇರಿ ನದಿಯಲ್ಲಿ ಈಜಲು‌ ಹೋಗಿ ನದಿಯಲ್ಲಿ ಕೊಚ್ಚಿ ಹೊಗಿರುವ ಘಟನೆ ನಡೆದಿದೆ.

Advertisement

ಬೆಂ ಳೂರು ಮೂಲದ ಮಂಜುನಾಥ್(30) ಕೊಚ್ಚಿ ಹೋಗಿರುವ ಯುವಕನಾಗಿದ್ದು, ನಿನ್ನೆ ಸ್ನೇಹಿತರ ಜೊತೆ  ಟಿಟಿ ವಾಹನದಲ್ಲಿ ಬಂದಿದ್ದ ಈತ ನದಿಯಲ್ಲಿ ಈಜಲು

ಹೋಗಿದ್ದು,ನೀರು ಹೆಚ್ಚಿದ ಕಾರಣಕ್ಕೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಸ್ಥಳೀ ಯರು ಶವದ ಹುಡುಕಾಟ ನಡೆಸಿದ್ರು, ಶವ ಪತ್ತೆಯಾಗಿಲ್ಲ ಪೊಲೀಸರು ಸೇರಿ ದಂತೆ ಅಗ್ನಿಶಾಮಕ ಠಾಣೆ ಪೊಲೀಸ ರು ಶವದ ಹುಡುಕಾಟ ನಡೆಸಿದ್ದಾರೆ‌.

ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾವೇರಿ ನದಿಗೆ ಬಿದ್ದು ಗೃಹಣಿ ಆತ್ಮಹತ್ಯೆ:

Advertisement

ಶ್ರೀರಂಗಪಟ್ಟಣ : ಪಟ್ಟಣದ ವೆಲ್ಲೆಸ್ಲಿ ಸೇತುವೆ ಮೇಲಿಂದ ಕಾವೇರಿ ನದಿಗೆ ಹಾರಿ ಗೃಹಣಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿ ರುವ ಘಟನೆ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೈಸೂರಿನ  ನಿವಾಸಿ ಮಧು ಎಂಬುವರ ಪತ್ನಿ ರಕ್ಷಿತ(31)ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯಾಗಿದ್ದು, ಸ್ಥಳೀಯರು ಆಕೆಯನ್ನು ರಕ್ಷಣಿಸಲು ಮುಂದಾದರೂ ಆಕೆ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ‌. ಈ ಸಂಬಂಧ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

ಶ್ರೀರಂಗಪಟ್ಟಣ : ಜಮೀನನಲ್ಲಿ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ತಾಲೂಕಿನ ರಾಂಪುರ ಗ್ರಾಮದ ರೈತನೋರ್ವನ  ಜಮೀನಿನಲ್ಲಿ ಮೈಸೂರಿನ ಗೋಕುಲಂ ನಿವಾಸಿ ಸತೀಶ್(45) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next