Advertisement

Sringeri: ಜಮೀನಿಗೆ ತೆರಳಿದ್ದ ರೈತನ ಮೇಲೆ ಕರಡಿ ದಾಳಿ

10:47 PM Aug 09, 2024 | Team Udayavani |

ಶೃಂಗೇರಿ: ಮರ್ಕಲ್‌ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಾಗೋಡಿನ ಕೃಷಿಕ ಸುರೇಂದ್ರ ಶುಕ್ರವಾರ (ಆ.09) ತಮ್ಮ ತೋಟದಲ್ಲಿ ಕಾಳು ಮೆಣಸಿಗೆ ಬೋರ್ಡೋ ಸಿಂಪಡಣೆ ಮಾಡುತ್ತಿದ್ದಾಗ ಕರಡಿಯೊಂದು ದಾಳಿ ಮಾಡಿ ಗಾಯಗೊಳಿಸಿದೆ.

Advertisement

ಕೆಳಕ್ಕೆ ಬಿದ್ದ ಅವರಿಗೆ ಕರಡಿ ಕಚ್ಚಿದೆ. ಕೂಗಿ
ಕೊಂಡಾಗ ಮನೆಯಲ್ಲಿದ್ದ ನಾಯಿಗಳು ಧಾವಿಸಿ ಬಂದಿದ್ದರಿಂದ ಕರಡಿ ಕಾಡಿನಲ್ಲಿ ಕಣ್ಮರೆಯಾಯಿತು.

ಸುರೇಂದ್ರ ಅವರ ದೇಹದ ವಿವಿಧೆಡೆಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next