Advertisement
ಭಕ್ತರು ಅಮ್ಮ ನವರ ದೇವಾಲಯದಿಂದ ಹೊಸಹಳ್ಳಿ ಚಿಗುರು ಕಡಿಯುವ ಮೂಲಸ್ಥಾನ ದವರೆಗೂ ನಡಿಗೆಯಲ್ಲಿ ಹೋಗಿ ಭಕ್ತರು ನಮ್ಮ ಕಷ್ಟಕಾರ್ಪಣ್ಯಗಳನ್ನು ನೆರವೇರಿಸಿ ಎಂದು ಅಮ್ಮನವರಲ್ಲಿ ಪ್ರಾರ್ಥಿಸಿದರು. ಮೂಗೂರು ಚಿಗುರು ಕಡಿಯುವುದು ಎಂದರೆ ಬಹಳ ಹೆಸರುವಾಸಿಯಾಗಿದೆ. ಅಮ್ಮನವರ ಉತ್ಸವ ಮೂರ್ತಿಯನ್ನು ದೇವಾಲಯದ ಆವರಣದಲ್ಲಿ ಪ್ರದಕ್ಷಿಣೆ ಹಾಕಿಸಿ ನಂತರ ಮಧ್ಯಾಹ್ನ 2 .30ಕ್ಕೆ ಅಮ್ಮನವರನ್ನು ಪಲ್ಲಕ್ಕಿಯಲ್ಲಿ ಮೂಗೂರಿನಿಂದ ಹೊಸಳ್ಳಿಗೆ ಕರೆ ತರಲಾಗುವುದು. ರಥೋತ್ಸವದ ರಾತ್ರಿ ನೇರಳೆ ಮರದ ಕೊಂಬೆಯನ್ನು ಸವರಿ ಬಂದಿರುತ್ತಾರೆ. ಬಳಿಕ ಹೊಸಳ್ಳಿ ಗ್ರಾಮದ ಕೆರೆಯ ಪಕ್ಕದಲ್ಲಿ ಪುರಾತನಕಾಲದ ನೇರಳೆ ಮರವಿದ್ದು ಅಲ್ಲಿ ವಿವಿಧ ಪೂಜೆಗಳು ನೆರವೇರುತ್ತವೆ. ಈ ಬಾರಿ 9 ಚಿಗುರು ಬಂದಿದ್ದು, ಇದು ಶುಭ ಸಂಖ್ಯೆಯಾಗಿದ್ದು ಗ್ರಾಮ ಮತ್ತು ರಾಜ್ಯಕ್ಕೆ ಶುಭವಾಗಲಿದೆ ಹಾಗೂ ಮಳೆ ಬೆಳೆ ಸಮೃದ್ಧಿಯಾಗುತ್ತದೆ ಎಂದು ಅರ್ಚಕರು ನುಡಿದರು.
Advertisement
ತ್ರಿಪುರ ಸುಂದರಿ ಅಮ್ಮನಿಗೆ ಭಕ್ತರಿಂದ ಬಾಯಿ ಬೀಗ ಸೇವೆ
03:37 PM Jan 10, 2023 | Team Udayavani |
ಪ್ರೊಪೋಸಲ್ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !
Advertisement
Udayavani is now on Telegram. Click here to join our channel and stay updated with the latest news.