Advertisement

ಕೈಲಾಸ ಪರ್ವತ ಕ್ಷೇತ್ರ ಭಾರತಕ್ಕೆ ಮತ್ತೆ ಲಭಿಸಲಿ; ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ

11:58 PM May 15, 2022 | Team Udayavani |

ಮೂಡುಬಿದಿರೆ: ಭಾರತೀಯರ ಪವಿತ್ರ ಸಿದ್ಧಕ್ಷೇತ್ರ ವಾಗಿರುವ ಕೈಲಾಸ ಪರ್ವತ ಮತ್ತೆ ಭಾರತದ ನಕ್ಷೆಯೊಳಗೆ ಸೇರ್ಪಡೆಗೊಳ್ಳುವಂತಾಗಲು ಭಾರತ ಸರಕಾರವು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಧ್ವನಿ ಎತ್ತ ಬೇಕಾಗಿದೆ ಎಂದು ಮೂಡುಬಿದಿರೆ ಶ್ರೀ ಜೈನಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಗ್ರಹಿಸಿದರು.

Advertisement

ತಿರುವನಂತಪುರದ ರಾಮದಾಸ ಆಶ್ರಮದಲ್ಲಿ ಶನಿವಾರ ಪ್ರಾರಂಭವಾದ ಮೂರು ರಾಜ್ಯಗಳ ದ್ವಿದಿನ ಸಂತ ಸಮ್ಮೇಳನದಲ್ಲಿ ಆಶೀರ್ವಚನ ನೀಡಿದ ಅವರು, ಹಿಂದೂ-ಜೈನ ತೀರ್ಥಕ್ಷೇತ್ರಗಳು, ಸಾಧು ಸಂತರಿಗೆ ರಕ್ಷಣೆ ನೀಡಬೇಕು, ಹಿಂದೂ-ಜೈನರ ಕ್ಷೇತ್ರಗಳಲ್ಲಿ ಸರಕಾರದ ಹಸ್ತಕ್ಷೇಪ ಇರಬಾರದು ಎಂದರು. ಸರ್ವ ಮತಗಳ ಸೌಹಾರ್ದಕ್ಕೆ ಸಂತ ಸಮ್ಮೇಳನ ನಿರ್ಣಯ ಕೈಗೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಅಯೋಧ್ಯಾ ಮಂದಿರ ಟ್ರಸ್ಟ್‌ ಕಾರ್ಯಾಧ್ಯಕ್ಷ ಕಮಲ ನಯನ ದಾಸ್‌ ಸಮ್ಮೇಳನ ಉದ್ಘಾಟಿಸಿದರು.

ಬೈಠಕ್‌ಗಳಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next