Advertisement

ಶ್ರೀಲಂಕಾಗೆ ಭಾರತದಿಂದ 429 ಕೋಟಿ ರೂ. ಸಾಲ

01:36 AM Jun 11, 2022 | Team Udayavani |

ಕೊಲಂಬೋ: ತನ್ನ ರೈತರಿಗೆ ಬೇಕಾದ ರಸಗೊಬ್ಬರ ಕೊಳ್ಳುವುದಕ್ಕಾಗಿ ಸಾಲ ನೀಡುವಂತೆ ಶ್ರೀಲಂಕಾ ಸರಕಾರ ಭಾರತವನ್ನು ಪ್ರಾರ್ಥಿಸಿದ್ದು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಭಾರತ, ಶ್ರೀಲಂಕಾಕ್ಕೆ 429 ಕೋಟಿ ರೂ.ಗಳನ್ನು ಸಾಲವನ್ನಾಗಿ ನೀಡಲು ಒಪ್ಪಿದೆ.

Advertisement

ಈ ಹಣದಿಂದ 65 ಮೆಟ್ರಿಕ್‌ ಟನ್‌ನಷ್ಟು ರಸಗೊಬ್ಬರ ತರಿಸಿಕೊಳ್ಳುವುದಾಗಿ ಲಂಕಾ ನಿರ್ಧರಿಸಿದೆ.

ಇದೇ ವೇಳೆ ವಿಶ್ವಸಂಸ್ಥೆ ಕೂಡ ಶ್ರೀಲಂಕಾದ 17 ಲಕ್ಷ ನಿರ್ಗತಿಕರಿಗೆ ನೆರವಾಗುವ ಉದ್ದೇಶದಿಂದ 367 ಕೋಟಿ ರೂ.ಗಳ ನೆರವು ನೀಡುವುದಾಗಿ ಪ್ರಕಟಿಸಿದೆ. ಈ ನಡುವೆ, ಗುರುವಾರ ಶ್ರೀಲಂಕಾದ ಉತ್ತರ ಭಾಗದಲ್ಲಿ ವಿದ್ಯುತ್‌ ಸ್ಥಾಪರವನ್ನು ಭಾರತದ ಅದಾನಿ ಗ್ರೂಪ್‌ ಜತೆಗೆ ಕೈ ಜೋಡಿಸಿ ನಿರ್ಮಿಸುವ ಪ್ರಸ್ತಾವನೆಗೆ ಅಲ್ಲಿನ ಸಂಸತ್ತು ಒಪ್ಪಿಗೆ ನೀಡಿದೆ.

ದುಸ್ಥಿತಿಗೆ ಸಿಲುಕಿರುವ ಶ್ರೀಲಂಕಾದ ಪರಿಸ್ಥಿತಿಯನ್ನು ಹತೋಟಿಗೆ ತರುವ ಉದ್ದೇಶಕ್ಕಾಗಿ, ಪ್ರಧಾನಿ ರನಿಲ್‌ ವಿಕ್ರಮ ಸಿಂಘೆ ಅವರು, “ತಂತ್ರಜ್ಞಾನ ಮತ್ತು ಬಂಡವಾಳ ಹೂಡಿಕೆ ಉತ್ತೇಜನ ಇಲಾಖೆ’ ಹಾಗೂ “ಮಹಿಳೆಯರು, ಮಕ್ಕಳ ಸಬಲೀಕರಣ ಇಲಾಖೆ’ ಎಂಬ ಎರಡು ಇಲಾಖೆಗಳನ್ನು ಹೊಸದಾಗಿ ಸ್ಥಾಪಿಸಿದೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next