Advertisement

ಶ್ರೀಲಂಕಾ ಬಾಂಬ್‌ ಸ್ಫೋಟ: ಗುರುತು ಸಿಗದ ಕನ್ನಡಿಗ

02:57 PM Apr 25, 2019 | Lakshmi GovindaRaju |

ಬೆಂಗಳೂರು: ಶ್ರೀಲಂಕಾದಲ್ಲಿ ಬಾಂಬ್‌ ಸ್ಫೋಟದಿಂದ ಸಾವಿಗೀಡಾಗಿರುವ ಏಳು ಜನ ಕನ್ನಡಿಗರ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ತರಲಾಗಿದ್ದು, ಇನ್ನೊಬ್ಬ ಕನ್ನಡಿಗನ ಪಾರ್ಥಿವ ಶರೀರವನ್ನು ಶ್ರೀಲಂಕಾ ಸರ್ಕಾರ ಗುರುತಿಸಿದೆ. ಆದರೆ, ಮೃತ ವ್ಯಕ್ತಿ ಯಾರು ಎನ್ನುವುದು ಖಚಿತವಾಗದ ಕಾರಣ ಅವರ ಪಾರ್ಥಿವ ಶರೀರವನ್ನು ಇನ್ನೂ ರಾಜ್ಯಕ್ಕೆ ತರಲಾಗಿಲ್ಲ.

Advertisement

ಶ್ರೀಲಂಕಾದಲ್ಲಿ ಕಳೆದ ಭಾನುವಾರ ನಡೆದ ಬಾಂಬ್‌ ಸ್ಫೋಟದಲ್ಲಿ 10 ಜನ ಭಾರತೀಯರು ಮೃತ ಪಟ್ಟಿದ್ದು, ಅವರಲ್ಲಿ ಎಂಟು ಜನ ಕನ್ನಡಿಗರು ಮೃತ ಪಟ್ಟಿದ್ದರು ಎಂದು ಶ್ರೀಲಂಕಾ ಸರ್ಕಾರ ಘೋಷಿಸಿದೆ. ಅವರಲ್ಲಿ ರಾಜ್ಯದ ಕಾಚರಕನಹಳ್ಳಿ ಹನುಮಂತರಾಯಪ್ಪ, ಲಕ್ಷ್ಮೀನಾರಾಯಣ, ರಂಗಪ್ಪ, ಅಡಕಮಾರನಹಳ್ಳಿ ಮಾರೇಗೌಡ, ಹಾರೋಕ್ಯಾತನಹಳ್ಳಿ ಪುಟ್ಟರಾಜು, ಗೋವೇನ್‌ ಹಳ್ಳಿ ಶಿವಕುಮಾರ್‌, ಬಿಟಿಎಂ ಲೇಔಟ್‌ನ ನಾಗರಾಜ್‌ ರೆಡ್ಡಿ ಅವರ ಪಾರ್ಥೀವ ಶರೀರವನ್ನು ರಾಜ್ಯಕ್ಕೆ ತರಲಾಗಿದ್ದು, ಬುಧವಾರ ಎಲ್ಲರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಶ್ರೀಲಂಕಾ ಸರ್ಕಾರ ಗುರುತಿಸಿರುವ ಇನ್ನುಳಿದ ಮೂವರು ಭಾರತೀಯರಲ್ಲಿ ಒಬ್ಬರು ಕನ್ನಡಿಗರು ಯಾರು ಎನ್ನುವುದನ್ನು ಕೇಂದ್ರ ಸರ್ಕಾರ ಇನ್ನೂ ಗುರುತಿಸದೆ ಇರುವುದರಿಂದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ನಿಲುವಿಗೆ ಕಾಯುತ್ತಿದೆ ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next