Advertisement

ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ

02:57 PM May 17, 2022 | Team Udayavani |

ಮಾಗಡಿ: ಸುಂದರ ಪ್ರಕೃತಿಯ ಮಡಿಲಲ್ಲಿರುವ ಇತಿಹಾಸ ಪ್ರಸಿದ್ಧ ಸಾವನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಭಕ್ತಸಾಗರದನಡುವೆ ವಿಜೃಂಭಣೆಯಿಂದ ಜರುಗಿತು.

Advertisement

ಶಾಸಕ ಎ.ಮಂಜುನಾಥ್‌ ಹಾಗೂ ಮಾಜಿ ಸಚಿವ ಎಚ್‌.ಎಂ.ರೇವಣ್ಣ, ರೆವಿನ್ಯೂ ಅಧಿಕಾರಿ ವೆಂಕಟೇಶ್‌ಹಾಗೂ ಇತರರು ರಥೋತ್ಸವಕ್ಕೆ ಶ್ರದ್ಧಾಭಕ್ತಿಯಿಂದಪೂಜೆ ಸಲ್ಲಿಸಿ ಚಾಲನೆ ನೀಡಿ ಭಕ್ತ ಸಾಗರರೊಡಗೂಡಿ ರಥ ಎಳೆದರು.ಭಕ್ತರು ರಥಕ್ಕೆ ಬಾಳೆಹಣ್ಣು, ದವನ ಎಸೆದು ತಮ್ಮ ಭಕ್ತಿ ಇಚ್ಚಾನುಸಾರ ಸಮರ್ಪಿಸಿದರು.

ರಥ ಎಳೆಯು ತ್ತಿದ್ದಂತೆ ಇತ್ತ ಭಕ್ತಸಮೂಹ ಮಜ್ಜಿಗೆಪಾನಕ, ಕೋಸಂ ಬರಿ ವಿತರಣೆ ಮಾಡುತ್ತಿದ್ದ ದೃಶ್ಯಸಾಮಾನ್ಯವಾಗಿತ್ತು. ರಥೋತ್ಸವದ ಪ್ರಯುಕ್ತ ವಿವಿಧಸಮಾಜದವರಿಂದ ಅನ್ನದಾಸೋಹ ಅರವಂಟಿಕೆ ಏರ್ಪಡಿಸಲಾಗಿತ್ತು. ಸಹಸ್ರಾರು ಭಕ್ತರು ದಾಸೋಹ ಸ್ವೀಕರಿಸಿದರು. ಸಂಜೆ ವಿವಿಧ ಉತ್ಸವಾದಿಗಳು ನಡೆಯಿತು.

ದೇವರ ಆರ್ಶೀವಾದ: ಈ ವೇಳೆ ಸುದ್ದಿಗಾರರೊಂದಿಗೆ ಶಾಸಕ ಎ.ಮಂಜುನಾಥ್‌ ಮಾತನಾಡಿ, ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥಕ್ಕೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿರಥಕ್ಕೆ ಚಾಲನೆ ನೀಡುತ್ತಿದ್ದಂತೆ ದೇವರ ಮೇಲಿದ್ದಹೂವು ಬಲಭಾಗದಿಂದ ಬಿದ್ದಿದೆ. ದೇವರ ಆರ್ಶೀವಾದ ಆಗಿದೆ. ದೇವರ ದಯೆಯಿಂದ ಈ ಬಾರಿ ಉತ್ತಮ ಮಳೆ ಬೀಳಲಿದೆ ಎಂಬ ನಂಬಿಕೆಯಿದೆ.ಸಮೃದ್ಧ ವಾಗಿ ಬೆಳೆ ಬರುತ್ತದೆ. ನಾಡಿನ ರೈತರು ಸಮೃದ್ಧಿ ಯಾಗಿ ಬದುಕು ನಡೆಸುವಂತಾಗಲಿ ಎಂದರು.

ಸಾಂಸ್ಕೃತಿಕ ಉತ್ಸವ: ಜಾತ್ರಾ ಮಹೋತ್ಸವದ ಅಂಗವಾಗಿ ದೇವರ ವಿವಿಧ ಉತ್ಸವಾದಿಗಳು ಹಾಗೂ ಜಾನ ಪದ ಕಲಾ ಸಾಂಸ್ಕೃತಿಕ ಉತ್ಸವಾದಿಗಳು ಅದ್ಧೂರಿಯಾಗಿ ನಡೆಯಿತು. ಅಂಕನಹಳ್ಳಿ ಶಿವಣ್ಣ ಅವರ ಪೂಜೆಕುಣಿತ ಭಕ್ತರನ್ನು ಆಕರ್ಷಿಸಿತ್ತು. ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ಶಾಸಕ ಎ. ಮಂಜುನಾಥ್‌ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

Advertisement

ಜಾತ್ರಾ ಮಹೋತ್ಸವ ಎಂದ ಮೇಲೆ ಸಹಸ್ರಾರು ಭಕ್ತರುಭಾಗವಹಿಸುವುದು ಸಾಮಾನ್ಯ ವಾಗಿರುತ್ತದೆ. ಪೊಲೀಸರು ರಸ್ತೆ ಬದಿ ಇದ್ದ ವಾಹನ ಗಳನ್ನು ತೆಗೆಸಿ ಸುಗಮಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಪ್ರಾಣಿ, ಪಕ್ಷಿಗಳಿಲ್ಲದೇ ಬಣಗುಡುತ್ತಿರುವ ವನದಾಮ :

ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಕೆಂಪೇಗೌಡ ವನದಾಮದಲ್ಲಿ ಯಾವುದೇ ಪ್ರಾಣಿ, ಪಕ್ಷಿಗಳಿಲ್ಲದ ವನದಾಮ ಬಣಗುಡುತ್ತಿತ್ತು. ಕೆಂಪೇಗೌಡ ವನದಾಮಕ್ಕೆ ನೂರಾರು ಭಕ್ತರು ತಮ್ಮ ಮಕ್ಕಳೊಂದಿಗೆ ತೆರಳಿದ್ದವರಿಗೆ ನಿರಾಸೆ ಉಂಟಾಗಿತ್ತು. ಸುಂದರವಾದ ಪ್ರಕೃತಿ ದತ್ತ ಸಾವನದುರ್ಗ ಪ್ರವಾಸಿಗರ ಸ್ವರ್ಗಾ ಎಂದೇ ಕರೆಯಲಾಗಿದೆ.ಇಲ್ಲಿನ ಕೆಂಪೇಗೌಡ ವನದಾಮದಲ್ಲಿ ಯಾವುದೇ ಪ್ರಾಣಿ ಪಕ್ಷಿಗಳು ಇಲ್ಲಿದರುವುದು ನಿಜಕ್ಕೂ ವಿಪರ್ಯಾಸ.ಸಂಬಂಧಪಟ್ಟ ಪ್ರವಾಸೋದ್ಯಮ ಸಚಿವರು ಇತ್ತ ಗಮನಹರಿಸಿ ಪ್ರವಾಸಿಗರ ಅನುಕೂಲಕ್ಕಾಗಿ ಮೂಲ ಸೌಕರ್ಯಗಳನ್ನು ಒದಗಿಸಬೇಕು. ವನದಾಮ ಅಭಿವೃದ್ಧಿ ಪಡಿಸುವಂತೆ ನಾಗರಿಕರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next