Advertisement

ರಂಗಭೂಮಿಯ ಹಿರಿಯ ಸಂಗೀತ ನಿರ್ದೇಶಕ ಶ್ರೀ ಕೆ.ರಾಘವೇಂದ್ರ ಭಟ್ ನಿಧನ

10:00 AM Nov 26, 2021 | Team Udayavani |

ಉಡುಪಿ: ರಂಗಭೂಮಿಯ ಹಿರಿಯ ಸಂಗೀತ ನಿರ್ದೇಶಕ ಶ್ರೀ ಕೆ.ರಾಘವೇಂದ್ರ ಭಟ್ ಶುಕ್ರವಾರ ಬೆಳಿಗ್ಗೆ 7.30ಕ್ಕೆ ಸ್ವಗೃಹದಲ್ಲಿ ವಯೋಸಹಜ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

Advertisement

ರಂಗಭೂಮಿ (ರಿ.) ಉಡುಪಿ ತಂಡದ ಬಹಳಷ್ಟು ನಾಟಕಗಳಿಗೆ ಸಂಗೀತ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ರಂಗಭೂಮಿ ತಂಡ ಭಾಗವಹಿಸಿದ್ದ ಹಲವಾರು ನಾಟಕ ಸ್ಪರ್ಧೆಗಳಲ್ಲಿ ಸಂಗೀತಕ್ಕೆ ಬಹುಮಾನ ಲಭಿಸಿತ್ತು. ಒಂದು ಕಾಲದಲ್ಲಿ ಉಡುಪಿಯ ಪರಿಸರದಲ್ಲಿ ಪ್ರಖ್ಯಾತಿಗಳಿಸಿದ್ದ “ರಂಗಭೂಮಿ” ಆರ್ಕೆಸ್ಟ್ರಾ ತಂಡವನ್ನು ಮುನ್ನಡೆಸಿದ್ದರು. ಹಲವು ಬಾರಿ ರಂಗಭೂಮಿಯ ನಾಟಕ ಸ್ಪರ್ಧೆಗೆ ತೀರ್ಪುಗಾರರಾಗಿದ್ದರು.

ಈ ಹಿಂದೆ ಎಲ್ಐಸಿ ಯ ಉದ್ಯೋಗಿಯಾಗಿದ್ದು, ನಿವೃತ್ತ ಜೀವನ ನಡೆಸುತ್ತಿದ್ದರು. ಬಹಳಷ್ಟು ಜನರನ್ನು ಸಂಗೀತ ಕ್ಷೇತ್ರಕ್ಕೆ ತಂದು ಮುನ್ನಡೆಸುತ್ತಿದ್ದರು.

ಮೃತರ ಅಂತ್ಯ ಸಂಸ್ಕಾರದ ವಿಧಿವಿಧಾನವು ಇಂದು ಬೆಳಗ್ಗೆ 10ಕ್ಕೆ ಕಡಿಯಾಳಿ ಕಟ್ಟೆ ಆಚಾರ್ಯ ಮಾರ್ಗದಲ್ಲಿ ಇರುವ ಅವರ ಮನೆಯಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next