Advertisement

ಶ್ರೀ ಭಾರತೀತೀರ್ಥರ ವರ್ಧಂತಿ ಉತ್ಸವ ಸಂಪನ್ನ

12:39 AM Apr 12, 2019 | Team Udayavani |

ಶೃಂಗೇರಿ: ಇಲ್ಲಿನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳ 69ನೇ ವರ್ಧಂತಿ ಉತ್ಸವವು ಗುರುವಾರ ನರಸಿಂಹವನದ ಗುರುಭವನದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.

Advertisement

ಬೆಳಗ್ಗೆಯಿಂದಲೇ ಗುರುಭವನದಲ್ಲಿ ಅಪಾರ ಭಕ್ತರು ಆಹಿ°ಕ ದರ್ಶನ ಪಡೆಯಲು ಸಾಲುಗಟ್ಟಿ ನಿಂತಿದ್ದರು. ಶುದ್ಧ ಕಾಷಾಯ ವಸ್ತ್ರ ಧರಿಸಿದ್ದ ಜಗದ್ಗುರುಗಳು ಮೌನವ್ರತದೊಂದಿಗೆ ದರ್ಶನ ನೀಡಿದರು.

ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಜಗದ್ಗುರುಗಳ ದರ್ಶನ ಪಡೆದು, ಆಶೀರ್ವಾದ ಪಡೆದರು.ವರ್ಧಂತಿ ಹಿನ್ನೆಲೆಯಲ್ಲಿ ಶ್ರೀ ಭಾರತೀತೀರ್ಥ ಸ್ವಾಮೀಜಿಗಳು ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ನೆರವೇರಿಸಿದರು. ಇದಕ್ಕೂ ಮೊದಲು ನರಸಿಂಹವನದಲ್ಲಿರುವ ಶ್ರೀ ಅಭಿನವವಿದ್ಯಾತೀರ್ಥ ಸ್ವಾಮೀಜಿ, ಶ್ರೀ ಚಂದ್ರಶೇಖರ ಭಾರತೀ ಸ್ವಾಮೀಜಿ, ಶ್ರೀ ಶಿವಾಭಿನವನರಸಿಂಹ ಭಾರತೀ ಸ್ವಾಮೀಜಿಗಳ ಅನು ಷ್ಠಾನ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಗುರುವಾರ ಶ್ರೀಮಠದ ಯಾಗಶಾಲೆಯಲ್ಲಿ ನಡೆಯುತ್ತಿದ್ದ ಶತಚಂಡಿಕಾಮಹಾಯಾಗ ಹಾಗೂ ಮಹಾರುದ್ರ ಮಹಾಯಾಗದ
ಪೂರ್ಣಾಹುತಿ ಉಭಯ ಜಗದ್ಗುರುಗಳ ಉಪಸ್ಥಿತಿಯಲ್ಲಿ ನಡೆಯಿತು.

ಜಗದ್ಗುರುಗಳ ವರ್ಧಂತಿ ಅಂಗವಾಗಿ ತಮಿಳುನಾಡು, ಆಂಧ್ರ ಸೇರಿದಂತೆ ವಿವಿಧ ಭಾಗದಿಂದ ಭಕ್ತಾದಿಗಳು ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next