Advertisement

ನಿಷೇಧವನ್ನು ಸುಪ್ರೀಂನಲ್ಲಿ ಪ್ರಶ್ನಿಸಿದ ಶ್ರೀಶಾಂತ್‌

06:05 AM Feb 02, 2018 | Team Udayavani |

ಹೊಸದಿಲ್ಲಿ: ಬಿಸಿಸಿಐ ಹೇರಿರುವ ಆಜೀವ ನಿಷೇಧದ ವಿರುದ್ಧ ಭಾರತ ತಂಡದ ಮಾಜಿ ವೇಗಿ ಎಸ್‌. ಶ್ರೀಶಾಂತ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

2013ರ ಐಪಿಎಲ್‌ ಸ್ಟಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದ ಶ್ರೀಶಾಂತ್‌ ಆಜೀವ ಕ್ರಿಕೆಟ್‌ ನಿಷೇಧಕ್ಕೆ ಒಳಗಾಗಿದ್ದರು. ಇದಾದ 2 ವರ್ಷದ ಬಳಿಕ ದಿಲ್ಲಿ ಹೈಕೋರ್ಟ್‌ ಶ್ರೀಶಾಂತ್‌ ಅವರನ್ನು ನಿರಪರಾಧಿ ಎಂದು ಘೋಷಿಸಿತ್ತು. ಆದರೂ ಬಿಸಿಸಿಐ ಶ್ರೀಶಾಂತ್‌ ವಿರುದ್ಧದ ನಿಷೇಧವನ್ನು ಹಿಂದಕ್ಕೆ ತೆಗೆದುಕೊಂಡಿರಲಿಲ್ಲ. ಇದೀಗ ಬೇರೆ ದಾರಿ ಕಾಣದೆ ಶ್ರೀಶಾಂತ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಮುಂದಿನ ವಿಚಾರಣೆಯನ್ನು ಫೆ. 5ಕ್ಕೆ ಮುಂದೂಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next