Advertisement

ಲ್ಯಾಂಡ್ ಆಗುತ್ತಿದ್ದ ವಿಮಾನಕ್ಕೆ ಅಪ್ಪಳಿಸಿದ ಬಿರುಗಾಳಿ; 40 ಮಂದಿ ಪ್ರಯಾಣಿಕರಿಗೆ ಗಾಯ!

09:52 AM May 02, 2022 | Team Udayavani |

ಕೋಲ್ಕತ್ತಾ: ಲ್ಯಾಂಡ್ ಆಗುತ್ತಿದ್ದ ಸ್ಪೈಸ್ ಜೆಟ್ ವಿಮಾನವು ಭಾರೀ ಬಿರುಗಾಳಿಗೆ ಸಿಲುಕಿದ್ದರಿಂದ ಕ್ಯಾಬಿನ್ ಲಗೇಜ್‌ಗಳು ಮೇಲೆ ಬಿದ್ದು ಕನಿಷ್ಠ 40 ಪ್ರಯಾಣಿಕರು ಗಾಯಗೊಂಡ ಘಟನೆಯು ಪಶ್ಚಿಮ ಬಂಗಾಳದ ದುರ್ಗಾಪುರದ ಕಾಜಿ ನಜ್ರುಲ್ ಇಸ್ಲಾಂ ವಿಮಾನ ನಿಲ್ದಾಣದಲ್ಲಿ ನಡೆದಿದೆ.

Advertisement

ಗಾಯಗೊಂಡ 40 ಮಂದಿ ಪ್ರಯಾಣಿಕರಲ್ಲಿ ಕನಿಷ್ಠ 10 ಮಂದಿಗೆ ಗಂಭೀರ ಗಾಯಗಳಾಗಿವೆ. ಉಳಿದವರು ಸಣ್ಣಪುಟ್ಟ ಗಾಯಗಳಾಗಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಹತ್ತು ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನವು ಚಂಡಮಾರುತಕ್ಕೆ ಹೇಗೆ ಸಿಲುಕಿತು ಎಂಬುದನ್ನು ಖಚಿತ ಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:ಐಪಿಎಲ್‌ ಫ‌ಸ್ಟ್‌ ಮ್ಯಾಚ್‌-2014: ಓಪನಿಂಗ್‌ ಮತ್ತು ಫೈನಲ್‌… ಎರಡನ್ನೂ ಗೆದ್ದ ಕೆಕೆಆರ್‌

ವಿಮಾನವು ಆಂಡಾಲ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಪ್ರಾರಂಭಿಸಿದಾಗ ವಿಮಾನವು ಅಲುಗಾಡಲು ಪ್ರಾರಂಭಿಸಿತು. ಭಾರಿ ಪ್ರಕ್ಷುಬ್ಧತೆಯ ಕಾರಣ ಕ್ಯಾಬಿನ್ ಸಾಮಾಗ್ರಿಗಳು ಪ್ರಯಾಣಿಕರ ಮೇಲೆ ಬಿದ್ದವು.

Advertisement

ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಪ್ರಯಾಣಿಕರೊಬ್ಬರು, “ಇಳಿಯುವಾಗ ಮೂರು ಜರ್ಕ್‌ಗಳು ಸಂಭವಿಸಿದವು. ನಾವು ಸೀಟ್ ಬೆಲ್ಟ್‌ಗಳನ್ನು ಹಾಕಿದ್ದೇವೆ. ಆದರೂ ನಾವು ನಮ್ಮ ಸೀಟ್ ಗಳ ಮೇಲೆ ಹಾರಿದ್ದೆವು.” ಎಂದು ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.

ಓರ್ವ ಪ್ರಯಾಣಿಕ ತೀವ್ರವಾಗಿ ಗಾಯಗೊಂಡಿದ್ದು, ಬೆನ್ನುಮೂಳೆಯ ಶಸ್ತ್ರಚಿಕಿತ್ಸಕರಿಗೆ ಉಲ್ಲೇಖಿಸಲಾಗಿದೆ ಎಂದು ಆಂಡಾಲ್ ಆಸ್ಪತ್ರೆಯ ಡಾ.ತಪನ್ ಕುಮಾರ್ ರೇ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next