Advertisement

ಮಂಡ್ಯ: ಊರಿಗೆ ಸೋಂಕು ಪ್ರವೇಶಿಸದಂತೆ ‘ನಾಡಮಾರಿ’ಗೆ ಕೋಳಿ ಬಲಿಕೊಟ್ಟು ರಸ್ತೆ ಮಧ್ಯೆ ಪೂಜೆ

07:29 PM May 18, 2021 | Team Udayavani |

ಮಂಡ್ಯ: ಕೋವಿಡ್ ಸೇರಿದಂತೆ ಯಾವುದೇ ಸೋಂಕಿನ ಮಾರಿ ಗ್ರಾಮ ಪ್ರವೇಶಿಸಿದಂತೆ ಗ್ರಾಮಸ್ಥರು ‘ನಾಡಮಾರಿ’ ಹೆಸರಿನಲ್ಲಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದ ಘಟನೆ ಮಳವಳ್ಳಿ ತಾಲ್ಲೂಕಿನ ನಾಗೇಗೌಡನದೊಡ್ಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

Advertisement

ಗ್ರಾಮದ ಪ್ರವೇಶಿಸುವ ರಸ್ತೆಯಲ್ಲಿ ಮೂರು ಕಲ್ಲುಗನ್ನಿಟ್ಟು ನಾಡಮಾರಿ ಕೊರೊನಾ ತೊಲಗುವಂತೆ ಪ್ರಾರ್ಥಿಸಿ ಪೂಜೆ ಮಾಡಲಾಗಿದೆ. ಪೂಜೆಗಾಗಿ ನಾಡಮಾರಿಗೆ ಕೋಳಿ ಬಲಿಕೊಟ್ಟು ಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಕಲಬುರಗಿಯಲ್ಲಿ ವಾರದ ಮೂರು ದಿನ ಸಂಪೂರ್ಣ ಲಾಕ್ ಡೌನ್ ಘೋಷಣೆ

ಗ್ರಾಮದಲ್ಲಿ ನಾಲ್ಕೈದು ಮಂದಿಗೆ ಕೋವಿಡ್ 19 ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕದಲ್ಲಿದ್ದು, ಇದೇ ಮೊದಲ ಬಾರಿಗೆ ‘ನಾಡಮಾರಿ’ ಎಂಬ ಹೆಸರಿನಲ್ಲಿ ಪೂಜೆ ಸಲ್ಲಿಸಿ ಮಾರಿ ಹೋಗಲಾಡಿಸುವಂತೆ ಪ್ರಾರ್ಥನೆ ಮಾಡಿದರು. ಈ ಪೂಜೆಯಿಂದ ಗ್ರಾಮ ಪ್ರವೇಶಿಸಿರುವ ಮಾರಿ ಕೋವಿಡ್ ಸೋಂಕು ಹೋಗಲಿದೆ ಎಂಬ ನಂಬಿಕೆ ಗ್ರಾಮಸ್ಥರದ್ದು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next