Advertisement

ಅತಿವೃಷ್ಟಿ ನಿವಾರಣೆಗಾಗಿ ಋಷ್ಯ ಶೃಂಗೇಶ್ವರಗೆ ಕೆಪಿಸಿಸಿಯಿಂದ ವಿಶೇಷ ಪೂಜೆ

09:34 AM Aug 09, 2022 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವ ಕಾರಣ ಅತಿವೃಷ್ಟಿ ನಿವಾರಣೆಗಾಗಿ ಕೆಪಿಸಿಸಿ ವತಿಯಿಂದ ಕಿಗ್ಗಾದ ಶ್ರೀ ಋಷ್ಯ ಶೃಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

Advertisement

ಮಳೆ ದೇವರೆಂದೇ ಪ್ರಖ್ಯಾತಿಯಾಗಿರುವ ಶೃಂಗೇರಿ ತಾಲೂಕಿನ ಕಿಗ್ಗಾದ ಪ್ರಸಿದ್ಧ  ಶ್ರೀ ಋಷ್ಯ ಶೃಂಗೇಶ್ವರ ದೇವಾಲಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೂಚನೆ ಮೇರೆಗೆ ಪೂಜೆ ನೆರವೇರಿಸಿದ ಕರ್ನಾಟಕ ಕಾಂಗ್ರೆಸ್ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಅವರು ಪೂಜೆ ಸಲ್ಲಿಸಿದರು.

ಇದನ್ನೂ ಓದಿ:ಭಾರೀ ಮಳೆ : ತಗ್ಗು ಪ್ರದೇಶಕ್ಕೆ ನುಗ್ಗಿದ ನೀರು, ಎಳನೀರು – ದಿಡುಪೆ ಸಂಪರ್ಕ ಕಡಿತ

ಋಷ್ಯ ಶೃಂಗೇಶ್ವರ ದೇವರಿಗೆ ಮಳೆ ಬೇಕು ಎಂದಾಗ ಕರುಣಿಸುವ, ಬೇಡ ಎಂದಾಗ ನಿಲ್ಲಿಸುವ ಶಕ್ತಿ ಇದೆ ಎಂಬುದು ಭಕ್ತರ ನಂಬಿಕೆ. ಸದ್ಯ ಭಾರಿ ಮಳೆಯಿಂದ ರೈತರು ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಳೆ ನಿಲ್ಲಿಸುವಂತೆ ಕಾಂಗ್ರೆಸ್ ವಿಶೇಷ ಪೂಜೆ ಸಲ್ಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next