Advertisement

ಅಸಮಂಜಸ ಬೇಡ,ನಾನು ಸ್ಪರ್ಧಿಸುವುದಿಲ್ಲ; ಸ್ಪೀಕರ್‌ ಸುಮಿತ್ರಾ ಮಹಾಜನ್‌

09:01 AM Apr 06, 2019 | Vishnu Das |

ಇಂಧೋರ್‌: ಲೋಕಸಭಾ ಸ್ಪೀಕರ್‌, ಇಂಧೋರ್‌ನ ಬಿಜೆಪಿ ಸಂಸದೆ ಸುಮಿತ್ರಾ ಮಹಾಜನ್‌ ಅವರು ನಾನು ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಶುಕ್ರವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಪಕ್ಷ ಇಂಧೋರ್‌ ಅಭ್ಯರ್ಥಿ ಪ್ರಕಟಣೆಗೆ ವಿಳಂಬ ಧೋರಣೆ ಮಾಡುತ್ತಿರುವ ಕುರಿತಾಗಿ ನೋವನ್ನು ವ್ಯಕ್ತಪಡಿಸಿರುವ 76 ರ ಹರೆಯದ ಬಿಜೆಪಿ ಹಿರಿಯ ನಾಯಕಿ ಸುಮಿತ್ರಾ ಮಹಾಜನ್‌, ನಾನು ಬಹಳ ಹಿಂದಿನಿಂದಲೂ ವರಿಷ್ಠರ ಬಳಿ ನಿರ್ಣಯವನ್ನು ತೆಗೆದುಕೊಳ್ಳಲು ಹೇಳಿದ್ದೆ. ಆದರೆ ಅವರ ಮನದಲ್ಲಿ ಇನ್ನೂ ಅಸಮಂಜಸ ಇರುವಂತಿದೆ. ಆದ್ದರಿಂದ ನಾನು ಈ ಘೋಷಣೆ ಮಾಡುತ್ತಿದ್ದು, ಈ ಬಾರಿಯ ಚುನಾವಣೆಗೆ ಸ್ಫರ್ಧಿಸುವುದಿಲ್ಲ ಎಂದಿದ್ದಾರೆ.

ಇಂಧೋರ್‌ನ ಜನತೆ ಇದುವರೆಗೆ ನನ್ನ ಮೇಲೆ ಪ್ರೀತಿ ಇರಿಸಿದ್ದಾರೆ. ಪಕ್ಷದ ನಾಯಕರು, ಕಾರ್ಯಕರ್ತರು ಸಹಕರಿಸಿದ್ದಾರೆ ಅವರೆಲ್ಲರಿಗೂ ಹೃದಯದಿಂದ ಅಭಾರಿಯಾಗಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಮಿತ್ರಾ ಮಹಾಜನ್‌ ಅವರು 8 ಬಾರಿ ಇಂಧೋರ್‌ನಿಂದ ಜಯ ಸಾಧಿಸಿ ಸಂಸತ್‌ ಪ್ರವೇಶಿಸಿದ್ದರು.

75 ದಾಟಿದ ನಾಯಕರಿಗೆ ಬಿಜೆಪಿ ಈ ಬಾರಿ ಟಿಕೆಟ್‌ ನೀಡದೆ ಬದಿಗೆ ಸರಿಸಿದ್ದು, ಎಲ್‌.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್‌ ಜೋಷಿ ಅವರಿಗೆ ಟಿಕೆಟ್‌ ನೀಡಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next