Advertisement

ಶಿರಸಿ: ಕರಡಿ ದಾಳಿಗೆ ತುತ್ತಾಗಿ‌ ಮೃತಪಟ್ಟ ವ್ಯಕ್ತಿಯ ಮನೆಗೆ ಸ್ಪೀಕರ್ ಕಾಗೇರಿ ಭೇಟಿ‌

04:05 PM Aug 16, 2022 | Team Udayavani |

ಶಿರಸಿ: ಆರು ದಿನಗಳ ಹಿಂದೆ ಕರಡಿ ದಾಳಿಗೆ ತುತ್ತಾಗಿ‌ ದೇವನಳ್ಳಿ ಸಮೀಪದ ಸುಂಡಳ್ಳಿಯ ಮೃತ ವ್ಯಕ್ತಿಯ ಮನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ‌ ನೀಡಿ ಸಾಂತ್ವನ‌ ಹೇಳಿದರು.

Advertisement

ಮೃತ ವ್ಯಕ್ತಿ ಓಂಕಾರ ಪದ್ಮಯ್ಯ ಜೈನ್ ಮನೆಗೆ ಭೇಟಿ ನೀಡಿದ ಕಾಗೇರಿ, ಸರಕಾರದ ಅರಣ್ಯ ಇಲಾಖೆಯಿಂದ ನೀಡಲಾಗುವ 7.50 ಲ.ರೂ. ಧನ ಸಹಾಯದ ನೆರವಿನ ಆದೇಶ ಪ್ರತಿ ಹಸ್ತಾಂತರಿಸಿ ಕುಟುಂಬದವರಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಜಿ. ಆರ್., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಘು ಡಿ., ತಹಶೀಲ್ದಾರ್ ಶ್ರೀಧರ ಮುದಲನಿ, ಪ್ರಮುಖರಾದ ಆರ್. ಡಿ. ಹೆಗಡೆ ಜಾನ್ಮನೆ, ಎನ್. ವಿ. ಹೆಗಡೆ ಬಕ್ಕಳ, ಸುನೀಲ್ ಭಟ್ಟ, ವಲಯ ಅರಣ್ಯಾಧಿಕಾರಿ ಮಂಜುನಾಥ ಹೆಬ್ಬಾರ, ಸರಗುಪ್ಪ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next