Advertisement

ಮೇ 23ರ ಬಳಿಕ ಬಿಜೆಪಿ, ಮೋದಿ, ಅಮಿತ್‌ ಶಾ ಗೆ ಕೆಟ್ಟ ದಿನಗಳು : ಮಾಯಾವತಿ ಭವಿಷ್ಯ

09:59 AM May 15, 2019 | Sathish malya |

ಬಲ್ಲಿಯಾ, ಉತ್ತರ ಪ್ರದೇಶ : 2019ರ ಲೋಕಸಭಾ ಚುನವಾಣೆಯ ಮತ ಎಣಿಕೆ ನಡೆಯುವ ಮೇ 23ರಿಂದ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಕೆಟ್ಟ ದಿನಗಳು ಆರಂಭವಾಗುತ್ತವೆ ಎಂದು ಬಹುಜನ ಪಕ್ಷದ ಅಧ್ಯಕ್ಷೆ ಮಾಯಾವತಿ ಭವಿಷ್ಯ ನುಡಿದಿದ್ದಾರೆ.

Advertisement

ಉತ್ತರ ಪ್ರದೇಶದಲ್ಲಿನ ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ ಮೈತ್ರಿಕೂಟದ ಬಿರುಗಾಳಿಗೆ ಬಿಜೆಪಿಯ ಅಡಿಪಾಯವೇ ಹಾರಿ ಹೋಗಲಿದೆ ಮತ್ತು ಅದು ಶಾಶ್ವತವಾಗಿ ಅದೃಶ್ಯವಾಗಲಿದೆ ಎಂದು ಮಾಯಾವತಿ ಇಂದಿಲ್ಲಿ ಚುನಾವಣಾ ರಾಲಿಯಲ್ಲಿ ಮಾತನಾಡುತ್ತಾ ಹೇಳಿದರು.

ಮೇ 23ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಗೋರಖ್‌ಪುರ ಮಠಕ್ಕೆ ಮರಳುವ ಸಿದ್ದತೆಯೂ ನಡೆಯಲಿದೆ ಎಂದು ಮಾಯಾವತಿ ಹೇಳಿದರು. ರಾಲಿಯಲ್ಲಿ ಎಸ್‌ಪಿ ಅಧ್ಯಕ್ಷ ಅಖೀಲೇಶ್‌ ಯಾದವ್‌ ಕೂಡ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next